ಆಸ್ಪತ್ರೆಯಲ್ಲೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಚಾಂದಿನಿ

0

ವೈದ್ಯಕೀಯ ಲೋಕದ ವಿಸ್ಮಯ ಎಂದೇ ಕರೆಯಲ್ಪಡುವ ಸುಳ್ಯದ ಚಾಂದಿನಿ ಪ್ರಸ್ತುತ ಹೈದರಾಬಾದ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಯೇ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

” ಚಾಂದಿನಿಯ ಆರೋಗ್ಯ ಸಮಸ್ಯೆಗೆ ಬಹಳ ಜನ ಸಹಾಯ ಮಾಡಿದ್ದಾರೆ. ಅವಳು ಎಲ್ಲೆಲ್ಲೋ ಚಿಕಿತ್ಸೆ ಪಡೆದು ಕೊನೆಗೆ ಹೈದರಾಬಾದ್ ತಲುಪಿ ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಕರ್ನಾಟಕ ಸರಕಾರ ಉದಾರ ವಾಗಿ 8 ಲಕ್ಷ ಮಂಜೂರು ಮಾಡಿ ಆಸ್ಪತ್ರೆಗೆ ತಿಳಿಸಿದೆ. ಆದರೆ ಆ ಮೊತ್ತ ಅಂತಿಮ ಬಿಲ್ ಗೆ ಪಾವತಿ ಆಗುತ್ತದೆ. ಈಗ ತುರ್ತಾಗಿ 3 ಲಕ್ಷ ಕಟ್ಟಬೇಕಾಗಿದೆ. ಆಸ್ಪತ್ರೆಯಿಂದ ಬಿಡುಗಡೆ ಆಗುವಾಗ ಸಿಗುವ 8 ಲಕ್ಷದಿಂದ ಈ ಮೊತ್ತ ವಾಪಾಸ್ ಸಿಗುತ್ತದೆ. ಆದರೆ ಮುಂಗಡ ಕಟ್ಟಬೇಕು. ಇಂತಹ ಪರಿಸ್ಥಿತಿ ಅವಳದ್ದು.
ಈ ಮದ್ಯೆ ಅವಳ ಮದುವೆ ಅನಿವೆರ್ಸರಿ ಆಸ್ಪತ್ರೆಯಲ್ಲೇ ಆಚರಿಸಲು ಹಿಂಜರಿಯಲಿಲ್ಲ. ತಾಯಿ ಅಕ್ಕ ಮಗಳು ಪತಿ ಎಲ್ಲ ಸೇರಿ ಕೇಕ್ ಕತ್ತರಿಸಿದ್ದಾರೆ. ಜೀವನೋತ್ಸಾಹ ಅಂದರೆ ಇದೇ ಅಲ್ಲವೇ? ನೀವು ಯಾರಾದರೂ ತತ್ಕಾಲಕ್ಕೆ ಮುಂಗಡ ನೀಡಿ ಸಹಾಯ ಮಾಡುವಿರಾ ? ” ಎಂದು ಎಂ.ಬಿ.ಸದಾಶಿವ ಅವರು ತನ್ನ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.