ಉಬರಡ್ಕ: ಮರಣ ಸಾಂತ್ವನ ಧನ ಸಹಾಯ ವಿತರಣೆ

0

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಾಗಿದ್ದು ಎ. 29 ರಂದು ನಿಧನರಾದ ಪುತ್ರ ಮುಗೇರ ಇವರಿಗೆ ಮರಣ ಸಾಂತ್ವನ ನಿಧಿ ರೂ.9000/- ವನ್ನು ಮೃತರ ಮೊಮ್ಮಗಳು ಗ್ರೀಷ್ಮಾಶ್ರೀ ಇವರಿಗೆ ಎ.29 ರಂದು ಸಂಘದ ನಿರ್ದೇಶಕರಾದ ಪಿ.ಎಸ್. ಗಂಗಾಧರರವರು ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಸುರೇಶ್ ಎಂ.ಎಚ್, ವಿಜಯಕುಮಾರ್ ಉಬರಡ್ಕ, ಶ್ರೀಮತಿ ಶಾರದಾ ಡಿ.ಶೆಟ್ಟಿ, ಹರಿಪ್ರಸಾದ್ ಪಾನತ್ತಿಲ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ಪಡ್ಪು, ಹಾಗೂ ಶಿವರಾಮ ಮಡಪ್ಪಾಡಿ, ನಾರಾಯಣ ಕಾಡುತೋಟ ಮೊದಲಾದವರು ಉಪಸ್ಥಿತರಿದ್ದರು.