ಸಂಪಾಜೆ : ಗಾಳಿ- ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

0

ಸಂಪಾಜೆ, ಕಲ್ಲುಗುಂಡಿ ಪರಿಸರದಲ್ಲಿ, ನಿನ್ನೆ ಸುರಿದ ಗಾಳಿ -ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಮೇ . 9 ರಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿದರು.

ಲತಾ ನಾಗೇಶ್ ಅಬೀರ ಗೂನಡ್ಕ , ನವೀನ ಅಬೀರ , ಯೋಗೀಶ್, ಧರ್ಮಪಾಲ ದಾಸ್, ಹಾಗೂ ಮೂಡಣ ಕಜೆ ರಾಮಚಂದ್ರರವರ ಮನೆಗಳಿಗೆ ಗಾಳಿ – ಮಳೆಯಿಂದ ಹಾನಿಯಾಗಿತ್ತು. ಶಾಸಕರ ಭೇಟಿ ಸಂದರ್ಭದಲ್ಲಿ ಸರಕಾರದಿಂದ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಆಲೆಟ್ಟಿ ಶಕ್ತಿ ಕೇಂದ್ರದ ಅಧ್ಯಕ್ಷೆ ಭಾರತಿ ಪುರುಷೋತ್ತಮ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಪುಷ್ಪಾ ಮೇದಪ್ಪ ಉಳುವಾರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಸತೀಶ್ ನಾಯ್ಕ, ಕೃಷ್ಣ ಪ್ರಸಾದ್ ಕಾಪಿಲ , ವರದರಾಜ್ ಸಂಕೇಶ್, ಗೌತಮ್ ಪಾರಿಮಜಲು ಉಪಸ್ಥಿತರಿದ್ದರು . ಹಾಗೂ ದೊಡ್ಡಡ್ಕ ದ ರಾಜಾರಾಂಪುರದಲ್ಲಿ ಅತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯ ಮನೆಗೆ ಭೇಟಿ ಸ್ವಾಂತನ ಹೇಳಿದರು.