ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ನರಸಿಂಹ ದೇವರ  ರಥೋತ್ಸವ

0

ವಿದ್ಯಾಪ್ರಸನ್ನ ತೀರ್ಥ ಶ್ರೀಗಳು, ಈಶಪ್ರಿಯ ತೀರ್ಥ ಶ್ರೀಗಳ ಉಪಸ್ಥಿತಿ

ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ನರಸಿಂಹ ಜಯಂತಿ ಸಂಭ್ರಮದಲ್ಲಿ
ಶ್ರೀ ಸಂಪುಟ ನರಸಿಂಹ ಸ್ವಾಮಿ ದೇವರ ಶ್ರೀ ಮಹಾರಥೋತ್ಸವ ಮೇ.23 ರ ಬೆಳಗ್ಗೆ
ಶ್ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರ ಹಾಗೂ ಅದಮಾರು ಮಠ ಉಡುಪಿಯ ಕಿರಿಯ ಯತಿಗಳು ಈಶಪ್ರಿಯ ತೀರ್ಥ ಶ್ರೀ ಪಾದರು ದಿವ್ಯ ಉಪಸ್ಥಿಯಲ್ಲಿ ಅದ್ದೂರಿ ಯಿಂದ ನೆರವೇರಿತು. ಬೆಳಿಗ್ಗೆ ಶ್ರೀ ದೇವರನ್ನು ಪಲ್ಲಕ್ಕಿ ಯಲ್ಲಿ ರಥಬೀದಿಗೆ ತಂದು  ರಥದಲ್ಲಿ ಕಾಶಿಕಟ್ಟೆ ವರೆಗೆ ಉತ್ಸವ ನಡೆಯಿತು.


ಈ ಸಂದರ್ಭದಲ್ಲಿ ಶ್ರೀ ಮಠದಆಡಳಿತ ಅಧಿಕಾರಿ ಸುದರ್ಶನ್ ಜೋಯಿಸ್, ವೇಣುಗೋಪಾಲ ಆಚಾರ್ ಮೈಸೂರು,
ಮಠದ ಪ್ರಸನ್ನ ಬೆಂಗಳೂರು , ಸುಬ್ರಹ್ಮಣ್ಯ ಗ್ರಾ. ಪಂ. ಸದಸ್ಯ ಹರೀಶ್ ಇಂಜಾಡಿ,


ಉದ್ಯಮಿ  ಯಜ್ಞೇಶ ಆಚಾರ್, ರವಿಕಕ್ಕೆಪದವು, ವಿದ್ವಾಂಸರು,ಗಣ್ಯರು, ಊರ ಪರವೂರ ಭಗವದ್ಭಕ್ತರು ಉಪಸ್ಥಿತರಿದ್ದರು.