ಸುದ್ದಿ ವರದಿ ಫಲಶ್ರುತಿ

0

ಪರ್ಸ್ ಹಿಂತಿರುಗಿಸಿ ಪ್ರಾಮಾಣಿಕತೆ

ನೆಲ್ಲೂರುಕೆಮ್ರಾಜೆ ಗ್ರಾಮದ ತೇಜರಾಜ್ ಅವರ ಪರ್ಸ್ ಜೂ. 14 ರಂದು ಸುಳ್ಯಕ್ಕೆ ಬಂದ ಸಂದರ್ಭದಲ್ಲಿ ಬಿದ್ದು ಹೋಗಿತ್ತು. ಸುದ್ದಿ ವೆಬ್ ಸೈಟ್ ನಲ್ಲಿ ಈ ಕುರಿತು ವರದಿ ಪ್ರಕಟಿಸಲಾಗಿತ್ತು.


ವರದಿಯನ್ನು ಗಮನಿಸಿದ ಸೀ ಫುಡ್ ಮಾರ್ಕೆಟ್ ನವರು ಸುದ್ದಿಯ ವರದಿಗಾರ ಶರೀಫ್ ಜಟ್ಟಿಪಳ್ಳರಿಗೆ ಕರೆ ಮಾಡಿ ತನಗೊಂದು ಪರ್ಸ್ ಸಿಕ್ಕಿರುವುದಾಗಿ ತಿಳಿಸಿದರು.
ನಂತರ ಮರ್ಕಂಜ ಸುದ್ದಿ ಪ್ರತಿನಿಧಿ ದಾಮೋದರ ಪಾಟಾಳಿ ಯವರ ಮೂಲಕ ವಾರಿಸುದಾರರಿಗೆ ತಿಳಿಸಲಾಯಿತು.
ಆ ಪರ್ಸ್ ತೇಜರಾಜ್ ಅವರದಾಗಿತ್ತು. ಅದನ್ನು ಅವರು ಮೀನು ಮಾರ್ಕೆಟ್ ಗೆ ಬಂದು ಪರ್ಸ್ ಪಡೆದುಕೊಂಡರು.