ಸುದ್ದಿ ವೆಬ್ಸೈಟ್ ವರದಿ ಫಲಶ್ರುತಿ

0

ಹಾಲೆಮಜಲು : ಬರೆ ತೆರವು

ನಿನ್ನೆ ಸುದ್ದಿ ವೆಬ್ಸೈಟ್ ವರದಿ ಫಲ ಶ್ರುತಿ ವೆಬ್ಸೈಟಿನಲ್ಲಿ ‘ಜಾಲ್ಸೂರು – ಸುಬ್ರಮಣ್ಯ ರಸ್ತೆ ನಿರ್ವಹಣೆ ಮರೆತ ಲೋಕೋಪಯೋಗಿ ಇಲಾಖೆ’ ಎಂಬ ಶಿರೋನಾಮೆಯಡಿ ವರದಿ ಪ್ರಕಟಗೊಂಡಿತ್ತು.

ಇವತ್ತು ಹಾಲೆಮಜಲು ಬಳಿಯಲ್ಲಿ ಜರಿದ ಬರೆಯನ್ನು ಇಲಾಖೆ ಜೆಸಿಬಿ ಬಳಸಿ ತೆರವುಗೊಳಿಸುವ ಕೆಲಸಕ್ಕೆ ಮುಂದಾಗಿದೆ. ಸೋಣಂಗೇರಿಯಿಂದ ಸುಬ್ರಮಣ್ಯದವರೆಗೆ ಅಲ್ಲಲ್ಲಿ ಬರೆ ಜರಿದು ಚರಂಡಿಯೆಲ್ಲ ಮುಚ್ಚಿಕೊಂಡಿದ್ದು, ಮಳೆಯ ನೀರೆಲ್ಲ ರಸ್ತೆಯಲ್ಲಿ ಹರಿಯುತ್ತಿದೆ, ಇದೆಲ್ಲವನ್ನು ಕೂಡ ಲೋಕೋಪಯೋಗಿ ಇಲಾಖೆ ದುರಸಿ ಪಡಿಸಬಹುದೇ ಕಾದು ನೋಡಬೇಕಾಗಿದೆ. (ವರದಿ ಡಿ. ಹೆಚ್.)