ಅಮರಶ್ರೀಭಾಗ್ ನಲ್ಲಿ ಚರಂಡಿಯೊಳಗೆ ಬಿದ್ದ ದನ -ಅಗ್ನಿ ಶಾಮಕ ದಳದವರಿಂದ ರಕ್ಷಣೆ

0

ಸುಳ್ಯದ ಅಮರಶ್ರೀ ಭಾಗ್ ನಲ್ಲಿರುವ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನಕ್ಕೆ ಪ್ರವೇಶಿಸುವ ದ್ವಾರದ ಬಳಿ ಇರುವ ಚರಂಡಿಗೆ ದನವೊಂದು ಆಕಸ್ಮತ್ತಾಗಿ ಬಿದ್ದು ಚರಂಡಿಯ ಒಳಗೆ ಜಾರಿಕೊಂಡು ಹೋಗಿ ಸಿಲುಕಿಕೊಂಡಿದೆ.

ಸ್ಥಳಕ್ಕೆ ಸುಳ್ಯ ಅಗ್ನಿಶಾಮಕ ದಳದವರು ಆಗಮಿಸಿ ಚರಂಡಿಯಿಂದ ದನವನ್ನು ಹೊರ ತೆಗೆಯಲು ಹರ ಸಾಹಸದಿಂದ ಹೊತೆಗೆದರು. ಓಪನ್ ಆಗಿ ಇದ್ದ ಚರಂಡಿಗೆ ಬಿದ್ದ ದನ ಜಾರಿಕೊಂಡು ಹೋಗಿ ಕಟ್ಟಡದ ಅಡಿ ಭಾಗದಲ್ಲಿ ಇರುವ ಛೇಂಬರ್ ನಲ್ಲಿ ಸಿಲುಕಿತ್ತು.
ಕೊಳವೆ ಬಾವಿಯೊಳಗೆ ಮಗು ಬಿದ್ದ ಪರಿಸ್ಥಿತಿಯೇ ನಿರ್ಮಾಣವಾಗಿತ್ತು. ಈಗಾಗಲೇ ಸುಳ್ಯ ತಹಶಿಲ್ದಾರ್ ರವರಿಗೆ ಮಾಹಿತಿ ನೀಡಿದ್ದು, ಮುಖ್ಯಾಧಿಕಾರಿಯವರು ವಿಷಯ ತಿಳಿಸಲಾಯಿತು. ಸ್ಥಳದಲ್ಲಿ ವಿಶ್ವ ಹಿಂದೂ ಪರಿಷತ್ತು ಮತ್ತು ಭಜರಂಗದಳ ಕಾರ್ಯಕರ್ತರು ಹಾಗೂ ಸ್ಥಳೀಯರು ಜಮಾಯಿಸಿದ್ದರು.