ಸುಳ್ಯಕ್ಕೆ ಬಂದ ಡಿಸಿಯನ್ನು ಅಂಬೇಡ್ಕರ್ ಭವನಕ್ಕೆ ಕರೆದೊಯ್ದ ದಲಿತ ಮುಖಂಡರು

0

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಇಂದು ಸುಳ್ಯಕ್ಕೆ ಆಗಮಿಸಿದ್ದು, ಅವರನ್ನು ಸುಳ್ಯದಲ್ಲಿ ತಡೆದ ದಲಿತ ಮುಖಂಡರು ಸುಳ್ಯದಲ್ಲಿ ನಿರ್ಮಾಣಗೊಂಡು ಅರ್ಧದಲ್ಲಿರುವ ಅಂಬೇಡ್ಕರ್ ಭವನದ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಹವಾಲು ಸಲ್ಲಿಸಿದ ಘಟನೆ ವರದಿಯಾಗಿದೆ.


ಅಂಬೇಡ್ಕರ್ ಭವನದ ಕಾಮಗಾರಿ ಅರ್ಧದಲ್ಲೇ ನಿಂತಿದ್ದು, ಸಮಸ್ಯೆಯ ಕುರಿತು ಡಿಸಿಯವರಿಗೆ ತಿಳಿಸಲಾಯಿತು. ಡಿಸಿಯವರು ಅನುದಾನ ಒದಗಿಸುವ ಬಗ್ಗೆ ಭರವಸೆ ನೀಡಿದರು.


ಈ ಸಂದರ್ಭದಲ್ಲಿ ನಂದರಾಜ ಸಂಕೇಶ, ಆನಂದ ಬೆಳ್ಳಾರೆ, ಕೇಶವ ಮಾಸ್ತರ್ ಹೊಸಗದ್ದೆ, ಕರುಣಾಕರ ಪಲ್ಲತ್ತಡ್ಕ, ಅಚ್ಚುತ ಮಲ್ಕಜೆ ಇದ್ದರು.