ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಇಂದು ಸುಳ್ಯಕ್ಕೆ ಆಗಮಿಸಿದ್ದು, ಅವರನ್ನು ಸುಳ್ಯದಲ್ಲಿ ತಡೆದ ದಲಿತ ಮುಖಂಡರು ಸುಳ್ಯದಲ್ಲಿ ನಿರ್ಮಾಣಗೊಂಡು ಅರ್ಧದಲ್ಲಿರುವ ಅಂಬೇಡ್ಕರ್ ಭವನದ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಹವಾಲು ಸಲ್ಲಿಸಿದ ಘಟನೆ ವರದಿಯಾಗಿದೆ.
![](https://sullia.suddinews.com/wp-content/uploads/2024/07/DC-Bheti-1024x576.jpg)
ಅಂಬೇಡ್ಕರ್ ಭವನದ ಕಾಮಗಾರಿ ಅರ್ಧದಲ್ಲೇ ನಿಂತಿದ್ದು, ಸಮಸ್ಯೆಯ ಕುರಿತು ಡಿಸಿಯವರಿಗೆ ತಿಳಿಸಲಾಯಿತು. ಡಿಸಿಯವರು ಅನುದಾನ ಒದಗಿಸುವ ಬಗ್ಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಂದರಾಜ ಸಂಕೇಶ, ಆನಂದ ಬೆಳ್ಳಾರೆ, ಕೇಶವ ಮಾಸ್ತರ್ ಹೊಸಗದ್ದೆ, ಕರುಣಾಕರ ಪಲ್ಲತ್ತಡ್ಕ, ಅಚ್ಚುತ ಮಲ್ಕಜೆ ಇದ್ದರು.