ಏ.25ರಂದು ಅಜ್ಜಾವರದ ಝೈನ್ ಎಕ್ಸಲೆನ್ಸ್ ಫಾರ್ ಮೋರಲ್ ಎಜುಕೇಶನ್ ಇದರ 8 ನೇ ವಾರ್ಷಿಕ – 2 ನೇ ವರ್ಷದ ಸನದುದಾನ ಸಮ್ಮೇಳನ

0

ಜುಫ್ರಿ ಮುತ್ತುಕೋಯ ತಂಙಳ್, ನೌಶಾದ್ ಬಾಖವಿ ಸಹಿತ ಹಲವು ಗಣ್ಯರ ಆಗಮನ

ಮಹಿಳೆಯರ ಸಮನ್ವಯ ವಿದ್ಯಾಭ್ಯಾಸ ಉನ್ನತಿಗಾಗಿ ಎಸ್.ಕೆ.ಎಸ್.ಎಸ್.ಎಫ್ ಅಡ್ಕ ಇರುವಂಬಳ್ಳ ಶಾಖೆ ಆರಂಭಿಸಿದ ಝೈನ್ ಎಕ್ಸಲೆನ್ಸ್ ಫಾರ್ ಮೋರಲ್ ಎಜುಕೇಶನ್ ಅಡ್ಕ ಅಜ್ಜಾವರ ವಿದ್ಯಾಸಂಸ್ಥೆಯ ಸನದುದಾನ ಮಹಾ ಸಮ್ಮೇಳನ – 2025 ಸಮಾರಂಭ ಎ.25 ಸಂಜೆ ನಡೆಯಲಿದೆ ಎಂದು ಸಮಿತಿಯ
ವರ್ಕಿಂಗ್‌ ಕಾರ್ಯದರ್ಶಿ ಮಹಮ್ಮದ್ ಶಾಫಿ ದಾರಿಮಿ ಅಜ್ಜಾವರ ಹೇಳಿದ್ದಾರೆ.

ಎ.19ರಂದು‌ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮದ ವಿವರ ನೀಡಿದ ಅವರು, ಸಂಜೆ 7 ಗಂಟೆಗೆ ಮಜ್ಲಿಸುನ್ನೂರ್ ಆತ್ಮೀಯ ಸಂಗಮ ಝೈನಿಯಾ ಚಯರ್ಮೆನ್ ಸಯ್ಯಿದ್ ಅಕ್ರಂ ಅಲೀ ತಂಙಳ್ ರವರ ನೇತೃತ್ವದಲ್ಲಿ ನಡೆಯಲಿದೆ.
ಕಾರ್ಯಕ್ರಮದ ದುಆ ನೇತೃತ್ವ ಸಯ್ಯಿದ್ ಝೈನುಲ್ ಅಬಿದೀನ್ ತಂಙಳ್ ದುಗಲಡ್ಕ ವಹಿಸಲಿದ್ದಾರೆ.

ಸನದುದಾನ ಸಮ್ಮೇಳನವನ್ನು ಸಮಸ್ತ ಕೇರಳ ಜಮ್ಯೂಹತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಜುಫ್ರೀ ಮುತ್ತುಕೋಯ ತಂಙಳ್ ಮಾತನಾಡಲಿದ್ದಾರೆ.

ಸನದುದಾನ ಪ್ರಭಾಷಣ ದ ಕ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೆರವೇರಿಸಲಿದ್ದಾರೆ.

ನಂತರ ಅಂತರಾಷ್ಟ್ರೀಯ ಖ್ಯಾತ ವಾಗ್ಮಿ ನೌಶಾದ್ ಬಾಖವಿ ತಿರುವನಂತಪುರಂ ರವರ ಪ್ರಭಾಷಣ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಯ್ಯಿದ್ ಹಕೀಂ ತಂಙಳ್ ಆದೂರು, ಅಬ್ದುಲ್ ಮಜೀದ್ ದಾರಿಮಿ ಪೈವಳಿಕೆ, ಇರ್ಷಾದ್ ದಾರಿಮಿ ಮಿತ್ತಬೈಲ್, ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಉಸ್ತಾದ್ ಶರೀಫ್ ಪೈಝಿ ಕಡಬ , ನಸೀಹ್ ದಾರಿಮಿ, ಅಬ್ದುಲ್ಲಾ ನಿಝಾಮಿ ಸೇರಿದಂತೆ ಸುಳ್ಯ ತಾಲೂಕಿನ ಜಮಾಹತಿನ ಖತೀಬ್ ಉಸ್ತಾದರು ಗಣ್ಯರು ಉಪಸ್ಥಿತರಿದ್ದಾರೆ.
ಅಲ್ಲದೇ ಶರೀಫ್ ಹಾಜಿ ವೈಟ್ ಸ್ಟೋನ್, ಸಿ ಎಂ ಅಬ್ದುಲ್ ಖಾದರ್ ಹಾಜಿ ಚೆರ್ಕಲ, ಅಬ್ದುಲ್ ರಹಿಮಾನ್ ಸಂಕೇಶ್ , ಲತೀಫ್ ಹರ್ಲಡ್ಕ, ಓಮೆಗಾ ಮುಹಮ್ಮದ್, ಅಬ್ದುಲ್ ಲತೀಫ್ ಹಾಜಿ ಬೆಂಗಳೂರು, ಉಮ್ಮರ್ ಹಾಜಿ ಬೆಂಗಳೂರು, ಬಶೀರ್ ಹಾಜಿ ಕೊಡಗು, ಹಮ್ಝ ಎಡಪಾಳಂ,ಇಕ್ಬಾಲ್ ಕೋಲ್ಪೆ, ಡಾ ನಝೀರ್ ಕಾವು, ಇಬ್ರಾಹಿಂ ಹಾಜಿ ಪುಸ್ಪಕ್, ಹಿರಾ ಖಾದರ್ ಹಾಜಿ, ಎನ್ ಎಸ್ ಅಬ್ದುಲ್ಲ ಹಾಜಿ, ಕೆ ಎಚ್ ಮುಹಮ್ಮದ್ ಈಶ್ವರಮಂಗಳ, ಇಬ್ರಾಹಿಂ ಹಾಜಿ ಸಿ ಫುಡ್,ಮಜೀದ್ ಜನತಾ, ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಅಬೂಬಕ್ಕರ್ ಮಂಗಳ ಸೇರಿದಂತೆ ಹಲವಾರು ಖ್ಯಾತ ಉಧ್ಯಮಿಗಳು ಭಾಗವಹಿಸಲಿದ್ದಾರೆ.

ಹಾಗೂ ಟಿ ಎಂ ಶಹೀದ್ ತೆಕ್ಕಿಲ್ , ಹಮೀದ್ ಕುತ್ತಮೊಟ್ಟೆ , ಮುಸ್ತಾಪಾ ಜನತಾ ರನ್ನು ಒಳಗೊಂಡ ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಪ್ರಯುಕ್ತ ಸಂಜೆ 4 :30 ಕ್ಕೆ ಸರಿಯಾಗಿ ಸ್ವಾಗತ ಸಮಿತಿ ಗೌರವಅಧ್ಯಕ್ಷರಾದ ಇಸಾಕ್ ಹಾಜಿ ಪಾಜಪಳ್ಳ ರವರು ಧ್ವಜಾರೋಹಣ ನಡೆಸಲಿದ್ದಾರೆ. ಮತ್ತು ಝೈನಿಯಾ ಪ್ರಿನ್ಸಿಪಲ್ ಅಬ್ದುಲ್ಲಾ ನಿಝಾಮಿ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಮಾರಂಭ ನಡೆಯಲಿದೆ ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಝೈನಿಯಾ ರಕ್ಷಾಧಿಕಾರಿಗಳಾದ ಸಯ್ಯಿದ್ ಹಕೀಂ ತಂಙಳ್ ಅದೂರು , ಸ್ವಾಗತ ಸಮಿತಿ ಚಯರ್ಮೇನ್ ಕತ್ತರ್ ಇಬ್ರಾಹಿಂ ಹಾಜಿ ಮಂಡೆಕೋಲು , ಝೈನಿಯಾ ಪ್ರ ಕಾರ್ಯದರ್ಶಿ ಮೊಹಿಯ್ಯದ್ದೀನ್ ಅನ್ಸಾರಿ, ಸ್ವಾಗತ ಸಮಿತಿ ಕನ್ವೀನರ್ ಸಿದ್ದೀಕ್ ಅಡ್ಕ ಉಪಸ್ಥಿತರಿದ್ದರು.