ಕಾಶ್ಮೀರದ ಉಗ್ರಗಾಮಿಗಳ ದಾಳಿಯನ್ನು ಖಂಡಿಸಿ ಅರಂಬೂರಿನಲ್ಲಿ ಮೊಂಬತ್ತಿ ಉರಿಸಿ ಪ್ರತಿಭಟನೆ

0

ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಉಗ್ರಗಾಮಿಗಳ ಭೀಕರ ದಾಳಿಯನ್ನು ಖಂಡಿಸಿ, ದಾಳಿಯಿಂದ ಅನ್ಯಾಯವಾಗಿ ಮಡಿದವರಿಗೆ ಆಲೆಟ್ಟಿ ಗ್ರಾಮದ ಅರಂಬೂರು ಸೇತುವೆ ಬಳಿ ಮೊಂಬತ್ತಿ ಉರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯೂಸೂಫ್ ಅಂಜಿಕಾರ್ ಸ್ವಾಗತಿಸಿದರು. ದಾಳಿಯಲ್ಲಿ ಅನ್ಯಾಯವಾಗಿ ಮಡಿದವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.


ಉಗ್ರಗಾಮಿಗಳ ದಾಳಿಯನ್ನು ಖಂಡಿಸಿ ಹಿರಿಯ ಕಾಂಗ್ರೆಸ್ ನಾಯಕರಾದ ಬಾಪೂ ಸಾಹೇಬ್ ಅರಂಬೂರು, ಬ್ಲಾಕ್ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ನಗರ ಪಂಚಾಯತ್ ಸದಸ್ಯರಾದ ಎಂ ವೆಂಕಪ್ಪ ಗೌಡ, ಮಾಜಿ ನಗರ ಪಂಚಾಯತ್ ಸದಸ್ಯರಾದ ಗೋಕುಲದಾಸ್ ಸುಳ್ಯ, ತಾಲೂಕು ಪಂಚಾಯತ್ ಕೆಡಿಪಿ ಸದಸ್ಯರಾದ ಧರ್ಮಪಾಲ ಕೊಯಿ೦ಗಾಜೆ ಮಾತನಾಡಿದರು.


ಈ ಸಂದರ್ಭದಲ್ಲಿ ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಅಮ್ಮು ರೈ ಅರಂಬೂರು, ರತ್ನಾಕರ ರೈ ತವಿದ್ ಆರಂಭೂರು, ನಾರಾಯಣ ರೈ ಆರಂಭರು, ಮೀನಾಕ್ಷಿ ಅರಂಬೂರು, ಜಯಲತ ಅರಂಬೂರು, ಜತ್ತಪ್ಪ ರೈ ಅರಂಬೂರು, ಕುಕ್ಕಪ್ಪ ರೈ, ದಿವಾಕರ ಪೈ, ಭವನಿಶಂಕರ ಶಂಕರ ಕಲ್ಮಡ್ಕ, ಬಶೀರ್ ಸಾಹೇಬ್ ಅರಂಬೂರು, ಬಾಷಾ ಸಾಹೇಬ್ ಅರಂಬೂರು, ಮಂಜುನಾಥ ಪೈ, ಪಹಿಮ್ ಅರಂಬೂರು, ಅಬ್ದುಲ್ಲ, ಮತ್ತಿತರರು ಉಪಸ್ಥಿತರಿದ್ದರು.