ವೆಂಕಟರಮಣ ದೇವ ಮಂದಿರದಲ್ಲಿ ಕರಪತ್ರ ಬಿಡುಗಡೆ
ಸುಳ್ಯ ಫ್ರೆಂಡ್ಸ್ ಕ್ಲಬ್ ಇದರ ವತಿಯಿಂದ ಮೇ.9 ರಿಂದ 12 ತನಕ ನಡೆಯಲಿರುವ ಫುಡ್ ಫೆಸ್ಟ್ (ಆಹಾರ ಮೇಳ) ಇದರ ಕರ ಪತ್ರ ಬಿಡುಗಡೆ ಕಾರ್ಯಕ್ರಮ ಎ.26 ರಂದು ಅಂಬಟೆಡ್ಕದಲ್ಲಿರುವ ಶ್ರೀ ವೆಂಕಟರಮಣ ದೇವ ಮಂದಿರದಲ್ಲಿ ನಡೆಯಿತು.















ಯುವ ಉದ್ಯಮಿ ಸೃಷ್ಟಿ ಮೊಬೈಲ್ಸ್ ಮಾಲಕ ಶೈಲೇಂದ್ರ ಸರಳಾಯ ರವರು ಕರ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಲಬ್ ಅಧ್ಯಕ್ಷ ಅನೂಪ್ ಪೈ ಯವರು ಸುಳ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಈ ರೀತಿಯ ಆಹಾರ ಮೇಳವನ್ನು ಆಯೋಜಿಸಲಾಗಿದೆ.
ದ.ಕ ಮತ್ತು ಉಡುಪಿ,ಕುಂದಾಪುರ ಮತ್ತು ಕಾಸರಗೋಡಿನ ಆಹಾರ ಖಾದ್ಯಗಳ ಸ್ಟಾಲ್ ಗಳು ಇರುವುದಲ್ಲದೆ ಜನರ ಅಭಿರುಚಿಗೆ ತಕ್ಕಂತೆ
ಶುದ್ಧ ಸಸ್ಯಹಾರಿ ಮತ್ತು ಮಾಂಸಾಹಾರಿ ವಿವಿಧ ಬಗೆಯ ಆಹಾರ ಖಾದ್ಯಗಳು ಆಹಾರ ಮೇಳದಲ್ಲಿಲಭ್ಯವಿರುತ್ತದೆ.
ಸಸ್ಯಹಾರಿ ಮತ್ತು ಮಾಂಸಾಹಾರಿ ಕೌಂಟರ್ ಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ನಾಲ್ಕು ದಿನಗಳ ಕಾಲ ಸಂಜೆ 4.00 ಗಂಟೆಯಿಂದ ಸ್ಟಾಲ್ ಗಳು ತೆರೆಯಲ್ಪಡುತ್ತದೆ.
ವಿಶೇಷ ಆಕರ್ಷಣೆಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಫುಡ್ ಫೆಸ್ಟ್ ಎಲ್ಲಾ ಪ್ರದೇಶದಲ್ಲಿ ಪ್ರತಿ ವರ್ಷ ನಡೆಯುತ್ತಿರುತ್ತದೆ. ಸುಳ್ಯದಲ್ಲಿ ಹೊಸ ಪ್ರಯೋಗವಾಗಿದೆ. ಮುಂದೆ ಪ್ರತಿ ವರ್ಷ ನಡೆಸಿಕೊಂಡು ಹೋಗುವ ಆಲೋಚನೆ ಇದೆ. ವಿವಿಧ ಪ್ರದೇಶದ ವಿವಿಧ ಬಗೆಯ ಆಹಾರ ಖಾದ್ಯಗಳನ್ನು ಸವಿಯುವ ಅವಕಾಶ ಸುಳ್ಯದ ಜನತೆಗೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಥಮ ಪ್ರಯೋಗ ಇದಾಗಿದೆ. ವಿಶೇಷವಾಗಿ ಪೆಟ್ ಶೋ ,ಡಾನ್ಸ್, ಮ್ಯೂಸಿಕಲ್ ನೈಟ್,ಮೈಮ್ ಶೋ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಉಚಿತ ಪ್ರವೇಶವಿದ್ದು ಸುಳ್ಯದ ಜನತೆ ಕೈ ಜೋಡಿಸಬೇಕು ಎಂದು ಗುರುದತ್ ನಾಯಕ್ ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಉದ್ಯಮಿ ಜಿ.ಜಿ.ನಾಯಕ್, ನವನೀತ್ ಎಂಟರ್ ಪ್ರೈಸಸ್ ಮಾಲಕ
ಕೇಶವ ನಾಯಕ್ ಸುಳ್ಯ, ಇಂಜಿನಿಯರ್ ಸೂರಜ್ ಕೊಡಿಯಾಲಬೈಲು, ಶರತ್ ಪರಿವಾರಕಾನ, ಸತೀಶ್ ಅರಂಬೂರು ಮತ್ತಿತರರು ಉಪಸ್ಥಿತರಿದ್ದರು.










