







ವಿನೋಬನಗರದ ವಿವೇಕಾನಂದ ಶಾಲಾ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಕಾರಿಂಜರವರು ಬರೆದಿರುವ ಚುಟುಕು ಕವನ ಸಂಕಲನ ಭಿನ್ನರಾಗದ ಪ್ರತಿಯನ್ನು ಮುರುಳ್ಯ ಗ್ರಾ.ಪಂ. ಗ್ರಂಥಾಲಯಕ್ಕೆ ಹಸ್ತಾಂತರಿಸಲಾಯಿತು.
ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು ಕವನದ ಪ್ರತಿಯನ್ನು ಗ್ರಂಥ ಪಾಲಕರಾದ ಸದಾನಂದ ಪೂಜಾರಿಯವರಿಗೆ ನೀಡಿದರು. ಪಂಚಾಯತ್ ಕಾರ್ಯದರ್ಶಿ ಸೀತಾರಾಮ ಸಂಪ್ಯಾಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.










