ಕೋಲ್ಚಾರು ನವಜ್ಯೋತಿ ಯುವಕ ಮಂಡಲ ವತಿಯಿಂದ ಪೈ೦ಬೆಚ್ಚಾಲು ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿ ಸ್ವಚ್ಛತೆ

0

ಆಲೆಟ್ಟಿ ಗ್ರಾಮದ ಕೋಲ್ಚಾರು ನವಜ್ಯೋತಿ ಯುವಕ ಮಂಡಲ ವತಿಯಿಂದ, ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ ಇದರ ಪಂಚ ಸಪ್ತತಿ ಕಾರ್ಯಕ್ರಮದ ಯೋಜನೆಯಂತೆ ಪೈ೦ಬೆಚ್ಚಾಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿರುವ ಕಾಡು ಹೆರೆದು ಸುತ್ತಮುತ್ತ ಸ್ವಚ್ಚತೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿ ಇದರ ಉಪಾಧ್ಯಕ್ಷರಾದ ದಯಾನಂದ ಪಾತಿಕಲ್ಲು, ನವಜ್ಯೋತಿ ಯುವಕ ಮಂಡಲ ಇದರ ಅಧ್ಯಕ್ಷರಾದ ಧರ್ಮಪಾಲ ಕೊಯಿ೦ಗಾಜೆ, ಸದಸ್ಯರುಗಳಾದ ನಿಸಾರ್ ತೋಟಕೊಚ್ಚಿ ಮತ್ತಿತರರು ಉಪಸ್ಥಿತರಿದ್ದರು