ಜಯಂತ್ ಕೆ. ಶೆಟ್ಟಿ ಬನ್ನಂಜೆಯವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

0

ಜೂ.‌ 27ರಂದು ನಿಧನರಾದ ಉದ್ಯಮಿ, ಸುಳ್ಯ ಗೃಹರಕ್ಷಕ ದಳದಲ್ಲಿ ಘಟಕಾಧಿಕಾರಿಯಾಗಿ ಸೇವೆ ಸಲ್ಲಿಸಿದ, ಸುಳ್ಯ ಹಳೆಗೇಟಿನ ಪ್ರಶಾಂತ್ ಬಾರ್ & ರೆಸ್ಟೋರೆಂಟ್ ಮಾಲಕ‌ ಜಯಂತ್ ಕೆ. ಶೆಟ್ಟಿ ಬನ್ನಂಜೆಯವರಿಗೆ ಶ್ರದ್ಧಾಂಜಲಿ ಸಭೆ ಜು. 8ರಂದು ಕೇರ್ಪಳದ ಬಂಟರ ಭವನದಲ್ಲಿ ಅವರ ವೈಕುಂಠ ಸಮಾರಾಧನೆಯ ಸಂದರ್ಭದಲ್ಲಿ ನಡೆಯಿತು. ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸವಣೂರು ಕೆ. ಸೀತಾರಾಮ ರೈ, ಉದ್ಯಮಿ, ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಎಂ.ಬಿ. ಸದಾಶಿವ ಮೃತರಿಗೆ ನುಡಿನಮನ‌ ಸಲ್ಲಿಸಿದರು.

ನ್ಯಾಯವಾದಿ ಎನ್. ಜಯಪ್ರಕಾಶ್ ರೈ ಕಾರ್ಯಕ್ರಮ ನಿರೂಪಿಸಿದರು. ಮೃತರ ಚಿಕ್ಕಪ್ಪ ಉಮಾನಾಥ ಶೆಟ್ಟಿ ಧರ್ಮಸ್ಥಳ, ತಾಯಿ ಶ್ರೀಮತಿ ಕಮಲಾಕ್ಷಿ ವಿ.ಶೆಟ್ಟಿ, ಪತ್ನಿ ಶ್ರೀಮತಿ ನಮಿತಾ ಜೆ. ಶೆಟ್ಟಿ, ಕು. ನೇಹಾ ಶೆಟ್ಟಿ, ಕು. ರಿಯಾ ಶೆಟ್ಟಿ ಸೇರಿದಂತೆ ಕುಟುಂಬಸ್ಥರು, ಬಂಧುಗಳು ಮತ್ತು ಜಯಂತ್ ಕೆ. ಶೆಟ್ಟಿಯವರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ‌ಪುಷ್ಪನಮನ ಸಲ್ಲಿಸಿದರು.