ನ.17-18: ಸುಳ್ಯದಲ್ಲಿ ಅದ್ದೂರಿಯ ಕಬಡ್ಡಿ ಉತ್ಸವ- ರಾಷ್ಟ್ರೀಯ ಮಟ್ಟದ ಆಹ್ವಾನಿತ ತಂಡಗಳಿಂದ ಸಂಪೂರ್ಣಪ್ರೋ ಮಾದರಿಯ ಪಂದ್ಯಾಟ

0

ಧ್ವನಿ ಬೆಳಕು ಮತ್ತು ಶಾಮಿಯಾನ ಮ್ಹಾಲಕರ ಸಂಘದ ಆಯೋಜನೆ

ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ 8ನೇ ವಾರ್ಷಿಕೋತ್ಸವದ ಅಂಗವಾಗಿ ಅಮೆಚೂರು ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ ಇದರ ಸಹಭಾಗಿತ್ವದಲ್ಲಿ ಸುಳ್ಯ ಕಬಡ್ಡಿ ಉತ್ಸವ ನ. 17 ಮತ್ತು 18 ರಂದು ಸುಳ್ಯ ಪ್ರಭು ಮೈದಾನದಲ್ಲಿ ನಡೆಯಲಿದ್ದು ಈ ಕುರಿತು ಸೆ.14 ರಂದು ಸಂಘದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.

ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶಿವಪ್ರಕಾಶ್ ಸುಳ್ಯ ರವರು ಸಂಘದವಾರ್ಷಿಕೋತ್ಸವದ ಅಂಗವಾಗಿ ಈ ಬಾರಿ ಸುಳ್ಯದಲ್ಲಿ ವಿಶೇಷವಾಗಿ ರಾಷ್ಟ್ರೀಯ ಮಟ್ಟದ ಆಟಗಾರರ 8 ಆಹ್ವಾನಿತ ತಂಡಗಳ ಎ ಗ್ರೇಡ್ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಆಯೋಜನೆ ಮಾಡಲಾಗಿದೆ.ಕಳೆದ ವರ್ಷ ಯುವಜನ ಸಂಯುಕ್ತ ಮಂಡಳಿಯ ಎದುರಿನ ಮೈದಾನದಲ್ಲಿ ಕಬಡ್ಡಿ ಪಂದ್ಯಾಟ ನಡೆಸಲಾಗಿತ್ತು‌. ಈ ಬಾರಿ ವಿಶೇಷವಾಗಿ ಪ್ರೋ ಮಾದರಿಯ ಪಂದ್ಯಾಟ ನಡೆಸುವ ಕಾರಣಕ್ಕಾಗಿ ಸ್ಥಳದಕೊರತೆಯಾಗದಂತೆ ಪ್ರಭು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಬಡ್ಡಿ ಪಂದ್ಯಾಟದ ಸಮಿತಿಯ ಅಧ್ಯಕ್ಷ ಭಾರತ ಶಾಮಿಯಾನ ಮಾಲಕ ಸಂಶುದ್ದೀನ್ ಜಿ ಪಿ ಯವರು ಮಾತನಾಡಿ ಕಳೆದ ವರ್ಷ ಯಶಸ್ವಿ ಪಂದ್ಯಾಟ ನಡೆಸಿರುತ್ತೇವೆ. ಈ ಬಾರಿ ವಿಶೇಷವಾಗಿ ರಾಷ್ಟ್ರಮಟ್ಟದ ಆಟಗಾರರನ್ನು ಕರೆಸಿಕೊಂಡು ಪಂದ್ಯಾಟದ ಆಯೋಜನೆ ಮಾಡಲಾಗಿದೆ. ಕರ್ನಾಟಕ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಹಿಮಾಚಲ ಪ್ರದೇಶ ,ಹರಿಯಾಣ, ದೆಹಲಿ ರಾಜ್ಯಗಳಿಂದ ಆಟಗಾರರು ಆಗಮಿಸಲಿದ್ದಾರೆ. ಪಂದ್ಯಾಟವು ಸಂಪೂರ್ಣವಾಗಿ ಪ್ರೊ ಮಾದರಿಯ ಪಂದ್ಯಾಟವಾಗಿದ್ದು ಆಧುನಿಕ ಸ್ಪರ್ಶ ನೀಡಲಾಗುವುದು. ಕ್ರೀಡಾಂಗಣದ 4 ಬದಿ ಗ್ಯಾಲರಿ ವ್ಯವಸ್ಥೆ ಹಾಗೂ ಇಂಡೋರ್ ಸ್ಟೇಡಿಯಂ ಮಾದರಿಯಲ್ಲಿ ಕ್ರೀಡಾಂಗಣವನ್ನು ಸಜ್ಜುಗೊಳಿಸಲಾಗುವುದು. ಮಳೆ ಬಂದರೂ ಕ್ರೀಡಾಭಿಮಾನಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಸಂಪೂರ್ಣ ವಾಟರ್ ಪ್ರೂಫ್ ಸ್ಟೇಡಿಯಂ ನಿರ್ಮಿಸಲಾಗುವುದು. ನಾಲ್ಕು ಸಾವಿರ ಮಂದಿ ಕುಳಿತುಕೊಳ್ಳುವ ಗ್ಯಾಲರಿ ನಿರ್ಮಾಣಮಾಡಲಾಗುವುದು. ಎಲ್.ಇ.ಡಿ ಪರದೆಗಳನ್ನು ಅಳವಡಿಸಲಾಗುವುದು. ಲೀಗ್ ಮಾದರಿಯಲ್ಲಿ ಪಂದ್ಯಾಟವಾಗಿದ್ದು ಸಮರ್ಥ ಆಟಗಾರರು ಭಾಗವಹಿಸಲಿದ್ದಾರೆ.


ವಿಜೇತ ತಂಡಗಳಿಗೆ ಪ್ರಥಮ ಬಹುಮಾನ
1 ಲಕ್ಷ ಮತ್ತು ಟ್ರೋಫಿ, ದ್ವಿತೀಯ ಬಹುಮಾನ 65,000 ಮತ್ತು ಟ್ರೋಫಿ, ತೃತೀಯ ಬಹುಮಾನ 35,000 ಮತ್ತು ಟ್ರೋಫಿ, ಚತುರ್ಥ ಬಹುಮಾನ 35,000 ಮತ್ತು ಟ್ರೋಫಿ ನೀಡಲಾಗುವುದು ಎಂದು ವಿವರ ನೀಡಿದರು.

ಪಂದ್ಯಾಟ ವೀಕ್ಷಣೆಗೆ ಬರುವಕ್ರೀಡಾಭಿಮಾನಿಗಳಿಗೆ ಪ್ರವೇಶ ಶುಲ್ಕ ನಿಗದಿಪಡಿಸಲಾಗುವುದು. ಪಂದ್ಯಾಟಕ್ಕೆ ಮುಂಚಿತವಾಗಿ ಸುಳ್ಯದ ಪ್ರಮುಖ ಬೀದಿಗಳಲ್ಲಿ ಆಟಗಾರರ ಕ್ರೀಡಾ ಜ್ಯೋತಿಯ ಜಾಥಾ ನಡೆಯಲಿರುವುದು. ಮಹಿಳೆಯರಿಗೆ ಪ್ರತ್ಯೇಕವಾಗಿ ಕುಳಿತುಕೊಂಡು ಪಂದ್ಯಾಟವನ್ನು ವೀಕ್ಷಿಸಲು ವ್ಯವಸ್ಥೆ ಕಲ್ಪಿಸಿಕೊಡಲಾಗುವುದು.
ಪಂದ್ಯಾಟ ಸಹಾಯಾರ್ಥ ಲಕ್ಕಿಡಿಪ್ ಕೂಪನ್ ಆಯೋಜಿಸಲಾಗುವುದು.


ಸುಳ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಅದ್ದೂರಿ ಕಬಡ್ಡಿ ಉತ್ಸವದ ಆಯೋಜನೆಗೆ ಸಿದ್ಧ ವಾಗಿದ್ದೇವೆ.
ಪ್ರೋ ಕಬಡ್ಡಿ ಪಂದ್ಯಾಟದ ನಿರ್ಣಾಯಕರುಗಳು ಭಾಗವಹಿಸಲಿರುವರು.
ಆಧುನಿಕತಂತ್ರಜ್ಞಾನದೊಂದಿಗೆ ಆಕರ್ಷಕ ಕಲಾತ್ಮಕ ವೇದಿಕೆ ಹಾಗೂ ಸುಸಜ್ಜಿತ ಗ್ಯಾಲರಿ ವ್ಯವಸ್ಥೆ ಕಲ್ಪಿಸಲಾಗುವುದು
ಎಂದು ಗುರುದತ್ ನಾಯಕ್ ವಿವರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸಂಚಾಲಕ ಶಾಫಿ ಪ್ರಗತಿಪೈಚಾರು,ಸಂಯೋಜಕ ಜಿ.ಜಿ ನಾಯಕ್ ಸುಳ್ಯ, ಕಾರ್ಯದರ್ಶಿ ಸತೀಶ್ ಕಲ್ಲುಗುಂಡಿ ಉಪಸ್ಥಿತರಿದ್ದರು.