ಕೆ.ಪಿ.ಜಾನಿಯವರಿಗೆ ಸಂಪಾಜೆ ಸಹಕಾರಿ ಸಂಘದ ವತಿಯಿಂದ ಗೌರವಾರ್ಪಣೆ

0


ದ.ಕ. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಜಾನಿ ಕೆ.ಪಿ.ರವರನ್ನು ಕರ್ನಾಟಕ ರಾಜ್ಯ ಸರ್ಕಾರದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ರಾಜ್ಯ ಸದಸ್ಯರಾಗಿ ರಾಜ್ಯ ಸರಕಾರವು ಆಯ್ಕೆಮಾಡಿದ್ದು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ, ಉಪಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್, ನಿರ್ದೇಶಕರಾದ ಗಣಪತಿ ಭಟ್, ಆನಂದ ಪಿ ಎಲ್, ಸುಮತಿ ಶಕ್ತಿ ವೇಲು, ಜಗದೀಶ ರೈ ಕೆ. ಆರ್. , ಹಮೀದ್ ಎಚ್, ಚಂದ್ರಶೇಖರ ಕೆ. ಯು, ಯಮುನಾ ಬಿ ಎಸ್, ಉಷಾ ಕೆ ಯಂ, ಪ್ರಕಾಶ್ ಕೆ ಪಿ ಮತ್ತು ರಾಜೀವಿ ಬೈಲೆ ಉಪಸ್ಥಿತರಿದ್ದರು.