ಸುಬ್ರಹ್ಮಣ್ಯ: ಕುಲ್ಕುಂದದಿಂದ ಕೈಕಂಬದ ವರೆಗೆ ಸ್ವಚ್ಛತಾ ಕಾರ್ಯಕ್ರಮ

0

ಕಸ ರಸ್ತೆ ಬದಿ ಬಿಸಾಡದಂತೆ ಡಾl ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಮನವಿ

ಸುಬ್ರಹ್ಮಣ್ಯದ ಡಾl ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ ಲೀಜನ್ ವತಿಯಿಂದ ಡಿ.3 ರಂದು ಕುಲ್ಕುಂದ ದಿಂದ ಕೈಕಂಬದ ವರೆಗೆ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು.

ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದು ದೇವರ ದರ್ಶನ ಪಡೆಯದರೊಂದಿಗೆ ಭಕ್ತಾದಿಗಳು ದೂರ ದೂರಗಳಿಂದ ಬೇರೆ ಬೇರೆ ಕ್ಷೇತ್ರಗಳಿಂದ ವಾಹನಗಳಲ್ಲಿ ಆಗಮಿಸುವ ಸಂದರ್ಭದಲ್ಲಿ ಮಾರ್ಗದ ಇಕ್ಕೆಲಗಳಲ್ಲಿ ಬಹಳಷ್ಟು ಕಸ ಕಡ್ಡಿಗಳು, ಪ್ಲಾಸ್ಟಿಕ್ ಬಾಟ್ಲಿಗಳು, ನೀರಿನ ಕ್ಯಾನುಗಳು, ಆಹಾರ ಪಟ್ಟಣಗಳನ್ನ ,ಎಸೆದು ಇಡೀ ಪರಿಸರವನ್ನ ಮಾಲಿನ್ಯ ಮಾಡತಕ್ಕದ್ದು ಕಂಡು ಬರುತ್ತಿದೆ. ಇದನ್ನ ಮನಗಂಡ ಡಾlರವಿ ಕಕ್ಕೆ ಪದವ್ ಸಮಾಜ ಸೇವಾ ಟ್ರಸ್ಟ್ ನವರು ತನ್ನ ಸುಮಾರು 60 ಕು ಮಿಕ್ಕಿ ಸ್ವಯಂಸೇವಕರೊಂದಿಗೆ ಪ್ರತಿ ವಾರ ರವಿವಾರದಂದು ಬೆಳಿಗ್ಗೆ 6:00ಯಿಂದ 9 ಗಂಟೆವರೆಗೆ ನಿರಂತರವಾಗಿ ಸ್ವಚ್ಛತಾ ಕಾರ್ಯಕ್ರಮಗಳನ್ನ ಮಾಡುತ್ತಾ ಬರುತ್ತಿದೆ .

ಅದರಂತೆ ಕುಲ್ಕುಂದ ದಿಂದ ಕೈಕಂಬದ ವರೆಗೆ ಮಾರ್ಗದ ಇಕ್ಕಲಗಳಲ್ಲಿ ಇದ್ದ ಎಲ್ಲಾ ಪ್ಲಾಸ್ಟಿಕ್ ಬಾಟಲಿಗಳು, ಚೀಲಗಳು, ಆಹಾರ ಪಟ್ಟಣಗಳು ,ಇನ್ನಿತರ ಕಚ್ಚಾ ವಸ್ತುಗಳನ್ನ ಸ್ವಚ್ಛತೆ ಮಾಡು ವುದರೊಂದಿಗೆ ಸೇವಾ ಕಾರ್ಯವನ್ನ ಕೈಗೊಂಡರು. ಸುಮಾರು ನಾಲ್ಕು ಲೋಡಿನಷ್ಟು ಕಸ ಸಂಗ್ರಹಿಸಲಾಗಿದೆ. ಈ ಸಂದರ್ಭ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವವರು ರಸ್ತೆ ಬದಿ ಬಿಸಾಡದಂತೆ ಮನವಿ ಮಾಡಿಕೊಂಡರು.