ಸುಬ್ರಹ್ಮಣ್ಯ: ಗಾಳಿ-ಮಳೆಗೆ ಉರುಳಿ ಬಿದ್ದ ಮರ, ವಿದ್ಯುತ್ ಕಂಬಗಳು

0

ಸುಬ್ರಹ್ಮಣ್ಯ ಪರಿಸರದಲ್ಲಿ ಮೇ.15 ರ ಸಂಜೆಯ ಗಾಳಿ-ಮಳೆಗೆ ವಿವಿಧೆಡೆ ಮರ ಬಿದ್ದು ಹಾನಿ ಸಂಭವಿಸಿದೆ.


ಸುಬ್ರಹ್ಮಣ್ಯ ಸಮೀಪದ ದೇವರ ಗದ್ದೆ ಎಂಬಲ್ಲಿ ಮರ ಬಿದ್ದು ಏಳು ವಿದ್ಯುತ್ ಕಂಬಗಳು ಹಾನಿಯಾಗಿದೆ. ದೇವರ ಗದ್ದೆಯಲ್ಲಿರುವ ಪುಷ್ಪಗಿರಿ ವನ್ಯಜೀವಿ ಸಂರಕ್ಷಣಾ ವ್ಯಾಪ್ತಿಯ ಚೆಕ್ ಪಾಯಿಂಟ್ ಗೆ ಮರ ಬಿದ್ದು ಹಾನಿ ಸಂಭವಿಸಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಗ್ರಾ.ಪಂ‌. ಸದಸ್ಯ ಹರೀಶ್ ಇಂಜಾಡಿ ಮತ್ತಿತರರು ಭೇಟಿ ನೀಡಿದ್ದರು.


ಸುಬ್ರಹ್ಮಣ್ಯದ ಕುಲ್ಕುಂದ-ಬಿಸ್ಲೆ ಘಾಟ್ ರಸ್ತೆಯ ಕೆಲವೆಡೆ ಮರ ಬಿದ್ದು ರಸ್ತೆ ಬಂದ್ ಆಗಿತ್ತು. ಅರಣ್ಯ ಇಲಾಖೆ ವತಿಯಿಂದ ತುರ್ತು ಕೆಲಸ ನಿರ್ವಹಿಸಿ ಮರಗಳ ತೆರವು ಮಾಡಿ ವಾಹನ ಸಂಚಾರಕ್ಕೆ ಅವಕಾಶ ಮಾಡಲಾಯಿತು.