ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಿಂದ ಸುಬ್ರಹ್ಮಣ್ಯ ದೇವರ ದರ್ಶನ

0

ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು.

ಸುಬ್ರಹ್ಮಣ್ಯಕ್ಕೆ ಆಗಮಿಸಿದ ಅವರಿಗೆ ಶಾಸಕಿ ಭಾಗೀರಥಿ, ಎ.ಸಿ ಜುಬಿನ್ ಮಹಾಪಾತ್ರ, ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಹೂಗುಚ್ಚ ನೀಡಿ ಬರಮಾಡಿಕೊಂಡರು.

ಬಳಿಕ ಆದಿ ಶೇಷ ವಸತಿ ಗೃಹಕ್ಕೆ ಆಗಮಿಸಿ ಡ್ರೆಸ್ ಬದಲಿಸಿ ದೇವಸ್ಥಾನಕ್ಕೆ ಆಗಮಿಸಿದ ಅವರನ್ನು ದೇವಸ್ಥಾನದ ಯಶಸ್ವಿನಿ ಆನೆ ಬರಮಾಡಿಕೊಂಡಿತು, ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಮಾಹಾ ಪೂಜೆ ಸೇವೆ ನೆರವೇರಿಸಿದರು. ಶಿವಕುಮಾರ್ ಅವರ ಪತ್ನಿ ಶ್ರೀಮತಿ ಉಷಾ ಡಿ.ಕೆ , ಮಗ ಅಮರ್ಥ್ಯ, ಮಗಳು ಆಭರಣ ಜತೆಗಿದ್ದರು. ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.