ಪಂಜಿಗಾರಿನಲ್ಲಿ ರಂಜಿಸಿದ ಕುಲಾಲ ಸುಧಾರಕ ಸೇವಾ ಸಂಘದ ಕೆಸರುಗದ್ದೆ ಕ್ರೀಡಾಕೂಟ

0

ಕೆಸರು ಗದ್ದೆಯಲ್ಲಿ ಮಿಂದೆದ್ದ ನೂರಾರು ಜನ ಕ್ರೀಡಾಪಟುಗಳು

ಕುಲಾಲ ಸುಧಾರಕ ಸೇವಾ ಸಂಘ ಸುಳ್ಯ ,ಬೆಳ್ಳಾರೆ ವತಿಯಿಂದ ತಾಲೂಕು ಮಟ್ಟದ ಸ್ವಜಾತಿ ಬಾಂಧವರ ಕೆಸರು ಗದ್ದೆ ಕ್ರೀಡಾಕೂಟವು ಜು.28 ರಂದು ಪಂಜಿಗಾರು ದಿ.ಅಣ್ಣುಮೂಲ್ಯ ರವರ ಗದ್ದೆಯಲ್ಲಿ ನಡೆಯಿತು.
ಕ್ರೀಡಾಕೂಟವನ್ನು ನಿವೃತ್ತ ಎ.ಎಸ್.ಐ.ಗುರುವಪ್ಪ ಮೂಲ್ಯ ಪಂಜಿಗಾರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಕುಲಾಲ ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕುಲಾಲ ಸಂಘದ ಕಾರ್ಯದರ್ಶಿ ಧನಂಜಯ ಕುಲಾಲ್ ಕಲ್ಮಡ್ಕ, ನಿಕಟಪೂರ್ವಾಧ್ಯಕ್ಷ ಶೈಲೇಶ್ ನೆಟ್ಟಾರು, ಹಿರಿಯರಾದ ಕೃಷ್ಣಪ್ಪ ಮೂಲ್ಯ ಕೋಡಿಮನೆ ಉಪಸ್ಥಿತರಿದ್ದರು.


ರಾಧಾಕೃಷ್ಣ ಕುಲಾಲ್ ಅತಿಥಿಗಳನ್ನು ಪರಿಚಯಿಸಿದರು.
ನಾಗೇಶ್ ಕುಲಾಲ್ ಸ್ವಾಗತಿಸಿ,ವಂದಿಸಿದರು.
ಕು.ನಿತ್ಯಶ್ರೀ ಪ್ರಾರ್ಥಿಸಿದರು,
ಗಣೇಶ್ ಕುಲಾಲ್ ಸಹಕರಿಸಿದರು.
ಬಳಿಕ ನೂರಾರು ಜನರು ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು.