ವಿಶು ಯುಗಾದಿಯ ಪ್ರಯುಕ್ತ ಪವಮಾನ ಅಭಿಷೇಕ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಏ.14 ರಂದು ಪಂಜ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ನಡೆಯಲಿರುವುದು. ಆ ಪ್ರಯುಕ್ತ ಮಾ.27 ರಂದು ವ್ಯವಸ್ಥಾಪನ ಸಮಿತಿಯ ಸಭೆ ನಡೆಸಲಾಗಿದ್ದು, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೇಶವ ಗೌಡ ಕುಧ್ವ ಇವರ ನೇತೃತ್ವದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಲಾಯಿತು.
ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವಿಷ್ಣು ಪೈಂದೋಡಿ ಅರ್ಚಕರು, ಕಿಶೋರ್ ಕುಮಾರ್ ಪುಂಡಿಮನೆ, ರವಿಕುಮಾರ್ ಚಳ್ಳಕೋಡಿ, ಧರ್ಮಪಾಲ ಕಂಡೂರು, ಲಕ್ಷ್ಮಣ ಗೌಡ ಕುಳ್ಳಕೋಡಿ, ಶ್ರೀಮತಿ ಲೀಲಾವತಿ ಅಳ್ಪೆ ,ಜನಾರ್ಧನ ನಾಯ್ಕ ಪೊಳೆಂಜ ಉಪಸ್ಥಿತರಿದ್ದರು.


