ತಾಲೂಕಿನ ಸಹಕಾರಿ ಸಂಸ್ಥಗಳಿಗೆ ಮಾದರಿಯಾಗಿ ಸುಳ್ಯ ಸಿ.ಎ. ಬ್ಯಾಂಕ್ ಬೆಳೆದಿದೆ : ಡಾ.ಎಂ.ಎನ್.ಆರ್
ಜಿಲ್ಲೆಯ ಸಹಕಾರಿ ಬ್ಯಾಂಕ್ ಗಳು ರಾಜ್ಯಕ್ಕೆ ಮಾದರಿ : ಕ್ಯಾ.ಬ್ರಿಜೇಶ್ ಚೌಟ
ದೇಶದ ಪ್ರತಿಷ್ಠಿತ ಬ್ಯಾಂಕ್ ಆಗಿ ಸಿ.ಎ.ಬ್ಯಾಂಕ್ ಮೂಡಿ ಬರಲಿ : ಡಿ.ವಿ.

ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ಶತಮಾನೋತ್ತರ ದಶಮಾನೋತ್ಸವ ಮತ್ತು ನೂತನ ಕಟ್ಟಡ ಸಿ.ಎ.ಬ್ಯಾಂಕ್ ಕಾಂಪ್ಲೆಕ್ಸ್ ಲೋಕಾರ್ಪಣೆ ಸಮಾರಂಭ ಎ.12ರಂದು ನಡೆಯಿತು.
ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ, ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಶತಮಾನೋತ್ತರ ದಶಮಾನೋತ್ಸವ ಹಾಗೂ ನೂತನ ಸಿ.ಎ.ಬ್ಯಾಂಕ್ ಕಾಂಪ್ಲೆಕ್ಸ್ ಉದ್ಘಾಟಿಸಿದರು.

ಸಿ.ಎ.ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಪಂಗಾಯರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ.ನೀರಬಿದಿರೆ, ಕೆ.ಎಂ.ಎಫ್. ನಿರ್ದೇಶಕ ಎಸ್.ಬಿ. ಜಯರಾಮ ರೈ ಮುಖ್ಯ ಅತಿಥಿಗಳಾಗಿದ್ದರು.
ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ ಸೋಣಂಗೇರಿ, ನಿರ್ದೇಶಕರುಗಳಾದ ರಾಮಚಂದ್ರ ಎನ್..ಎ, ವಾಸುದೇವ ನಾಯಕ್ ಪುತ್ತಿಲ, ಚಂದ್ರಶೇಖರ ಡಿ.ಕೆ., ಪ್ರಭೋದ್ ಶೆಟ್ಟಿ ಮೇನಾಲ, ಬಾಲಗೋಪಾಲ ಸೇರ್ಕಜೆ ಮೋಂಟಡ್ಕ, ವೆಂಕಟ್ರಮಣ ಮುಳ್ಯ, ಹರಿಣಾಕ್ಷಿ ರೈ ಬೇಲ್ಯ, ಹೇಮಂತ್ ಕುಮಾರ್ ಕಂದಡ್ಕ, ಶಿವರಾಮ ಕೇರ್ಪಳ, ಕೇಶವ ಮಾಸ್ತರ್ ಹೊಸಗದ್ದೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಎಸ್.ಪಿ. ವೇದಿಕೆಯಲ್ಲಿ ಇದ್ದರು.

ನ್ಯಾಯವಾದಿ ಸುಮ ಕೆ.ಎಸ್. ಪ್ರಾರ್ಥಿಸಿದರು. ಅಧ್ಯಕ್ಷ ವಿಕ್ರಂ ಅಡ್ಪಂಗಾಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಚಂದ್ರಶೇಖರ ಸೋಣಂಗೇರಿ ವಂದಿಸಿದರು. ಅಚ್ಚುತ ಅಟ್ಲೂರು – ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
