ಸೈಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಸ್ವೀಕಾರ

0


ಸುಳ್ಯದ ಸೈಂಟ್ ಜೋಸೆಫ್ ಪ್ರೌಢಶಾಲೆಯ ನೂತನ ಸಾಲಿನ ವಿದ್ಯಾರ್ಥಿ ಸರಕಾರದ ಪದಗ್ರಹಣ ಸಮಾರಂಭದಲ್ಲಿ ಸುದ್ದಿ ಜನಾಂದೋಲನದ ಲಂಚ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞೆ ಸ್ವೀಕರಿಸಲಾಯಿತು. ದುರ್ಗಾಕುಮಾರ್ ನಾಯರ್‌ಕೆರೆಯವರು ಪ್ರತಿಜ್ಞಾ ವಿಧಿ ಬೋಧಿಸಿ ಫಲಕವನ್ನು ಸಂಸ್ಥೆಗೆ ಹಸ್ತಾಂತರಿಸಿದರು.


ಶಾಲಾ ಸಂಚಾಲಕರಾದ ರೆ.ಫಾ. ವಿಕ್ಟರ್ ಡಿಸೋಜಾ, ಮುಖ್ಯ ಶಿಕ್ಷಕಿ ಸಿ.ಬಿನೋಮಾ, ಎಸ್‌ಪಿಎಲ್ ಫಾತಿಮತ್ ಶಮ್ನಾ, ಎಎಸ್‌ಪಿಎಲ್ ಸಮನ್ಯು ಎಸ್.ಶೆಟ್ಟಿ, ಸ್ಪೀಕರ್ ಸಾನ್ವಿ ಪಿ.ಎನ್., ಗವರ್ನರ್ ಸಂಜಯ್ ಬಾಬು, ವಿರೋಧ ಪಕ್ಷ ನಾಯಕಿ ಸಮೀಕ್ಷಾ ಗಣೇಶ್ ಸಹಿತ ವಿದ್ಯಾರ್ಥಿ ಸರಕಾರದ ಪ್ರತಿನಿಧಿಗಳು ಉಪಸ್ಥಿತರಿದ್ದರು.