ಎಡಮಂಗಲ : ಕಜೆ ಬಸ್ ನಿಲ್ದಾಣದಲ್ಲಿ ಬಿದ್ದು ವ್ಯಕ್ತಿ ಮೃತ್ಯು

0

ಎಡಮಂಗಲ ಗ್ರಾಮದ ಕಜೆ ಬಸ್ ನಿಲ್ದಾಣದಲ್ಲಿ ಮೇನಾಲದ ಶಾಂತಾರಾಮ ಎಂಬವರು ಬಿದ್ದು ಮೃತಪಟ್ಟ ಘಟನೆ ಜೂ.24 ರಂದು ರಾತ್ರಿ ನಡೆದಿದೆ.
ಅಜ್ಜಾವರ ಗ್ರಾಮದ ಮೇನಾಲ ಶಾಂತಾರಾಮ (40) ಎಂಬವರು ತನ್ನ ಪತ್ನಿ ಮನೆ ಎಡಮಂಗಲ ಡೈಮಳ ಎಂಬಲ್ಲಿಗೆ ಹೋಗುವವರಾಗಿದ್ದು ಇವರ ಮೃತದೇಹ ಕಜೆ ಬಸ್ಟೆಂಡ್ ನಲ್ಲಿ ಪತ್ತೆಯಾಗಿದೆ.


ಈ ಬಗ್ಗೆ ಶಾಂತಾರಾಮರವರ ಅಣ್ಣ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ವಿಪರೀತ ಮದ್ಯಪಾನ ಅಥವಾ ಅಸೌಖ್ಯದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ ಎಂದು ತಿಳಿದು ಬಂದಿದೆ.