ಸುಳ್ಯ ಜೂನಿಯರ್ ಕಾಲೇಜಿನಲ್ಲಿ ನವೀಕೃತ ಕಚೇರಿ ಉದ್ಘಾಟನೆ

0


’ ಮುಟ್ಟು ಗುಟ್ಟಲ್ಲ’ ಆರೋಗ್ಯ ಅರಿವು ಕಾರ್ಯಕ್ರಮ ಹಾಗೂ ಅಭಿನಂದನಾ ಸಮಾರಂಭ

ಸ.ಪ.ಪೂ.ಕಾ ಸುಳ್ಯ ಇದರ ಪ್ರೌಢ ಶಾಲಾ ವಿಭಾಗದ ನವೀಕೃತ ಕಛೇರಿ ಉದ್ಘಾಟನೆಗೊಂಡಿತು. ಶಾಸಕಿ ಭಾಗೀರಥಿ ಮುರುಳ್ಯರವರು ಉದ್ಘಾಟಿಸಿದರು. ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ೨೦೨೨ – ೨೩ನೇ ಸಾಲಿನಲ್ಲಿ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ೩೧ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.


ಕಳೆದ ವರ್ಷ ನಡೆದ ರಾಜ್ಯಮಟ್ಟದ ಎನ್. ಎಂ. ಎಂ. ಎಸ್. ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ೧೧ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಮುಟ್ಟು ಗುಟ್ಟಲ್ಲ ಎನ್ನುವ ಆರೋಗ್ಯ ಅರಿವು ಕಾರ್ಯಕ್ರಮದ ಪ್ರಯುಕ್ತ ಪ್ರೌಢಶಾಲಾ ವಿಭಾಗದ ಎಲ್ಲಾ ವಿದ್ಯಾರ್ಥಿನಿಯರಿಗೆ ದಾನಿಗಳ ಸಹಾಯದಿಂದ ಕೊಡ ಮಾಡುತ್ತಿರುವ ಮರುಬಳಕೆಯ ಬಟ್ಟೆಯ ಪ್ಯಾಡನ್ನು ಸಾಂಕೇತಿಕವಾಗಿ ವಿತರಿಸಲಾಯಿತು.
ನೂತನ ಶಾಸಕರನ್ನು ಪೋಷಕರ, ಶಿಕ್ಷಕರ, ವಿದ್ಯಾರ್ಥಿಗಳ ಪರವಾಗಿ ಅಭಿನಂದಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಜೇಶ್ವರಿ ಕಾಡುತೋಟ ವಹಿಸಿದ್ದರು. ಹಿರಿಯ ವಿದ್ಯಾರ್ಥಿಗಳಾದ ಡಾ. ಸುಭಾಷಿಣಿ ಶ್ರೀವತ್ಸ ಪ್ರಾಧ್ಯಾಪಕರು ಮಂಗಳೂರು ಇವರು ಪ್ರಧಾನ ಭಾಷಣ ಗೈದರು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಮೋಹನ ಗೌಡ, ಸಂಪನ್ಮೂಲ ವ್ಯಕ್ತಿಗಳಾದ ಡಾ. ವೀಣಾ, ಮುಟ್ಟು – ಗುಟ್ಟಲ್ಲ ಕಾರ್ಯಕ್ರಮದ ಸಂಯೋಜಕರಾದ ಜಲಜಾಕ್ಷಿ ಕೆ.ಡಿ, ದಾನಿಗಳಾದ ಎಂ.ಬಿ.ಸದಾಶಿವ, ಲೋಕಯ್ಯ ಗೌಡ ಎ, ಪ್ರದೀಪ್, ಶಿಕ್ಷಣ ಸಂಯೋಜಕರಾದ ನಳಿನಿ ಕೆ, ಎಸ್ ಡಿ.ಎಮ್.ಸಿ. ಸದಸ್ಯರಾದ ಪುಟ್ಟಣ್ಣ, ಜಯರಾಮ, ಲತಾ ರೈ, ಕವಿತಾ, ರೇಖಾ ಉಪಸ್ಥಿತರಿದ್ದರು.


ಉಪಪ್ರಾಂಶಪಾಲರಾದ ಪ್ರಕಾಶ ಮೂಡಿತ್ತಾಯ ಸ್ವಾಗತಿಸಿ, ಹಿರಿಯ ಶಿಕ್ಷಕರಾದ ಡಾ. ಸುಂದರ ಕೇನಾಜೆ ವಂದಿಸಿದರು. ಶಿಕ್ಷಕರಾದ ಪೂರ್ಣಿಮಾ, ವೀಣಾ , ಸೋನಾಲಿ, ಲತಾ ಪೈ ಸಹಕರಿಸಿದರು ಶಿಕ್ಷಕಿ ಪೂರ್ಣಿಮಾ ಟಿ ಕಾರ್ಯಕ್ರಮವನ್ನು ನಿರೂಪಿಸಿದರು.