ಜಟ್ಟಿಪಳ್ಳ ಶಾಲೆಯಲ್ಲಿ ಗಿಡ ನೆಡುವ ಮತ್ತು ಗಿಡ ವಿತರಣೆ ಕಾರ್ಯಕ್ರಮ

0

ಶ್ರೀ ಧರ್ಮಸ್ಥಳ “ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಳ್ಯ ವಲಯದ ವತಿಯಿಂದ ಸುಳ್ಯದ ಜಟ್ಟಿಪಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕೋತ್ಸವವನ್ನು ಗಿಡ ನೆಡುವ ಮತ್ತು ಗಿಡ ವಿತರಣೆ ಮಾಡುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತಾಲೂಕಿನ ಕೃಷಿ ಮೇಲ್ವಿಚಾರಕರಾದ ರಮೇಶ್ ಹಾಗೂ ಸುಳ್ಯ ವಲಯದ ಮೇಲ್ವಿಚಾರಕರಾದ ಪ್ರಿಯಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಯೋಜಕರಾದ ಪಿ.ಜಿ. ಜಯರಾಮ, ಸುರೇಶ ಪರಿವಾರಕಾನ, ದಿನೇಶ್ ಅರಂಬೂರು, ರತೀಶ ಅರಂಬೂರು, ಭರತ, ಪ್ರಶಾಂತ ಡಿ., ಪ್ರಶಾಂತ, ಕೌಶಿಕ್, ಅನಂತ ಪಿಆರ್., ಗುರುರಾಜ್, ಹರ್ಷಿತ್, ಸುನಿಲ್, ಮಧುಸೂದನ, ಯತೀಶ, ಜಯಪ್ರಕಾಶ್ ಸದಸ್ಯರು ಉಪಸ್ಥಿತರಿದ್ದರು.