ದುಗ್ಗಲಡ್ಕ : ಬಾವಿಗೆ ಬಿದ್ದ ದನ -ಅಗ್ನಿಶಾಮಕ ದಳದಿಂದ ರಕ್ಷಣೆ

0

ದುಗ್ಗಲಡ್ಕ ಸಮೀಪದ ನೀರಬಿದರೆ ಎಂಬಲ್ಲಿ ದನವೊಂದು ಆಳದ ಬಾವಿಗೆ ಬಿದ್ದು, ಅದನ್ನು ಅಗ್ನಿಶಾಮಕ ದಳದವರು ರಕ್ಷಿಸಿದ ಘಟನೆ ಇಂದು ನಡೆದಿದೆ.
ನೀರಬಿದಿರೆ ಪರಮೇಶ್ವರ ಎಂಬ ವರ ಅಂಗಳದಲ್ಲಿರುವ ಬಾವಿಗೆ ದನವೊಂದು ಓಡಿಕೊಂಡು ಬಂದು ಬಿತ್ತು .

ತಕ್ಷಣ ಪರಮೇಶ್ವರ ಅವರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದರು. ಆಗಮಿಸಿದ ಅಗ್ನಿಶಾಮಕ ದಳದವರು ಬಾವಿಗೆ ಬಿದ್ದ ದನವನ್ನು ಮೇಲಕ್ಕೆತ್ತಿ ರಕ್ಷಿಸಿದರು. ಅವರೊಂದಿಗೆ ಊರವರು ಸಹಕರಿಸಿದರು.

ದನವು ಭಾರಿ ಆಳದ ಬಾವಿಗೆ ಬಿದ್ದರೂ ಸಣ್ಣ ಪುಟ್ಟ ಗಾಯಗೊಂಡು ಪ್ರಾಣಪಾಯದಿಂದ ಪಾರಾಗಿದೆ.