ಕೇರ್ಪಡ ಕೂಡುಕಟ್ಟುನಲ್ಲಿ ಪ್ರಶ್ನಾ ಚಿಂತನೆ ಕಾರ್ಯಕ್ರಮ

0

ಕೇರ್ಪಡ ಕೂಡುಕಟ್ಟಿನ ಶ್ರೀ ಉಳ್ಳಾಕುಲು ಶಿರಾಡಿ ರಾಜನ್ ದೈವ ಮತ್ತು ಪರಿವಾರದೈವಗಳ ಸ್ಥಾನ ಚಾವಡಿ, ಬೊಳ್ಕಜೆ ಯಲ್ಲಿ ಪುತ್ತೂರಿನ ದೈವಜ್ಞರಾದ ಶ್ರೀಧರ್ ಭಟ್ ರವರ ನೇತೃತ್ವದಲ್ಲಿ ಜುಲೈ 6 ರಂದು ಪ್ರಶ್ನಾ ಚಿಂತನೆ ಕಾರ್ಯಕ್ರಮ ನಡೆಯಿತು.


ಸ್ಥಾನಜಾವಡಿ ಜೀರ್ಣೋದ್ಧಾರಗೊಂಡು ಬ್ರಹ್ಮ ಕಲಶೋತ್ಸವ ಅದ್ದೂರಿಯಾಗಿ ನಡೆದಿದೆ. ಪ್ರಧಾನ ದೈವದ ಕಡ್ತಲೆಯಲ್ಲಿ ಒಡಕು, ಇನ್ನಿತರ ಅಭಿವೃದ್ಧಿ ಚಿಂತನೆ ಮತ್ತು ಪರಿಹಾರವನ್ನು ಕಂಡು ನಿರ್ಣಯವನ್ನು ಮಾಡಲಾಯಿತು.


ಹಂತ ಹಂತವಾಗಿ ಅಭಿವೃದ್ಧಿ ಮಾಡುವುದೆಂದು ಎಲ್ಲರೂ ತೀರ್ಮಾನಿಸಿ ಕಾಲಕಾಲಕ್ಕೆ ಸಭೆ ಸೇರುವುದು ಎಂದು ಚಿಂತನ ಕಾರ್ಯದಲ್ಲಿ ತಿಳಿಸಲಾಯಿತು.
ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಎಂಜೀರು, ಕಾರ್ಯದರ್ಶಿ ಸಾಯಿಪ್ರಸಾದ್ ಬೊಳ್ಕಜೆ, ಖಜಾಂಜಿ ಅವಿನಾಶ್ ದೇವರಮಜಲು, ಸಕ್ರಿಯ ಸದಸ್ಯರು ಉಪಸ್ಥಿತರಿದ್ದರು.