ಕನಕಮಜಲು : ಚಿನ್ನಾಭರಣ ಕಳವು ಪ್ರಕರಣ

0

ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಆಗಮನ

ಕನಕಮಜಲು ಗ್ರಾಮದ ಬುಡ್ಲೆಗುತ್ತು ಯುರೇಶ್ ಅವರ ಮನೆಯಲ್ಲಿ ಚಿನ್ನಾಭರಣ ಕಳವು ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು,

ಇದೀಗ ಪೊಲೀಸ್ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಮನೆಗೆ ಆಗಮಿಸಿರುವುದಾಗಿ ತಿಳಿದುಬಂದಿದೆ.

ಮನೆಯೊಳಗೆ ಆಗಮಿಸಿದ ಪೊಲೀಸ್ ಶ್ವಾನವು ಅಲ್ಲಿಂದ ಸುಣ್ಣಮೂಲೆ ರಸ್ತೆಯಾಗಿ ವಿಷ್ಣುಮೂರ್ತಿ ಒತ್ತೆಕೋಲದ ದ್ವಾರದ ತನಕ ಓಡಿ ಹಿಂತಿರುಗಿತೆಂದು ತಿಳಿದುಬಂದಿದೆ.

ಬೆರಳಚ್ಚು ತಜ್ಞರು ತಮ್ಮ ಕರ್ತವ್ಯ ನಡೆಸುತ್ತಿದ್ದು, ಸ್ಥಳದಲ್ಲಿ ಸುಳ್ಯ ಕ್ರೈಮ್ ವಿಭಾಗದ ಎಸ್.ಐ. ಸರಸ್ವತಿ ಹಾಗೂ ಪೊಲೀಸರು ಇರುವುದಾಗಿ ತಿಳಿದುಬಂದಿದೆ.