10 ಕುಟುಂಬಗಳು ನಡೆದಾಡುವ ದಾರಿ ಅಗೆದರೆಂಬ ವಿಚಾರ : ಪೋಲೀಸ್ ದೂರು

0

ಎಸ್.ಐ., ಆರ್.ಐ.‌ಸ್ಥಳ ಭೇಟಿ – ಅಗೆದವರಿಂದಲೇ ರಸ್ತೆ ಸರಿಪಡಿಸಿ‌ ಇತ್ಯರ್ಥ

ತಮ್ಮ ವರ್ಗ ಜಾಗದಲ್ಲಿ 10 ಕುಟುಂಬದವರು ನಡೆದಾಡುವ ರಸ್ತೆಯನ್ನು ಮಾಲಕರು‌ ಮುಚ್ಚಿಸಿದ ಹಾಗೂ ಈ ಕುರಿತು ಸುಬ್ರಹ್ಮಣ್ಯ ಪೋಲೀಸರಿಗೆ ದೂರು ಹೋಗಿ ಸ್ಥಳಕ್ಕೆ ಬಂದ ಪೋಲೀಸರು ಹಾಗೂ ಕಂದಾಯ ಇಲಾಖೆಯವರು ಸ್ಥಳೀಯರ ಅಹವಾಲು ಆಲಿಸಿ ರಸ್ತೆ ಅಗೆದವರಿಂದಲೇ ಮುಚ್ಚಿಸಿದ ಘಟನೆ ವರದಿಯಾಗಿದೆ.

ಐವತ್ತೊಕ್ಲು‌ ಗ್ರಾಮದ ಪಾಂಡಿಗದ್ದೆ ಎಂಬಲ್ಲಿ ಈ‌ ಘಟನೆ ನಡೆದಿದೆ. ಸುರೇಶ ಮತ್ತು ದಿನೇಶ ಎಂಬವರು ರಸ್ತೆಯನ್ನು‌ ಅಗೆದಿದ್ದರೆಂದೂ ಈ ವಿಚಾರ ಸುಬ್ರಹ್ಮಣ್ಯ ಪೋಲೀಸರಿಗೆ‌ ಹೋಗಿ ಎಸ್.ಐ. ಸ್ಥಳಕ್ಕೆ ಬಂದರು.‌ವಿಷಯ‌ ತಿಳಿದು ಕಂದಾಯ ನಿರೀಕ್ಷಕ ಚಂದ್ರ‌ನಾಯ್ಕ್ ರು ಸ್ಥಳಕ್ಕೆ ಬಂದು ರಸ್ತೆ ಅಗೆದವರನ್ನು ವಿಚಾರಣೆ ನಡೆಸಿದರು.

ಇದು 10 ಕುಟುಂಬದವರು ನಡೆದಾಡುವ ರಸ್ತೆ. ವರ್ಗವಾಗಿದ್ದರೂ ಹಾಗೆ‌ ಅಗೆಯಲು ಆಗುವುದಿಲ್ಲ. ಇದನ್ನು ‌ಮುಚ್ಚಬೇಕು ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೆಂದು ಕಂದಾಯ ನಿರೀಕ್ಷಕರು ಸೂಚನೆ ನೀಡಿದರೆಂದೂ ಬಳಿಕ ಅಗೆದವರಿಂದಲೇ ರಸ್ತೆ‌ ಮುಚ್ಚಿಸಿ, ಪ್ರಕರಣ ಇತ್ಯರ್ಥ ಪಡಿಸಿದರೆಂದು ತಿಳಿದುಬಂದಿದೆ.