ಆಲೆಟ್ಟಿ: ಮೊರಂಗಲ್ಲು ಧೂಮಾವತಿದೈವಸ್ಥಾನದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಆಚರಣೆ

0

ಆಲೆಟ್ಟಿ ಗ್ರಾಮದ ಮೊರಂಗಲ್ಲು ಶ್ರೀ ಧೂಮಾವತಿ ಸಪರಿವಾರ ದೈವಸ್ಥಾನದ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ಇಂದು ಬೆಳಗ್ಗೆ ತಂಬಿಲ ಸೇವೆ ಹಾಗೂ ವಿಶೇಷ ಪೂಜೆಯು ನಡೆಯಿತು.
ಆಲೆಟ್ಟಿ ಸದಾಶಿವ ದೇವಸ್ಥಾನದ ಅರ್ಚಕ ಹರ್ಷಿತ್ ಬನ್ನಿಂತಾಯರು ಪೂಜಾ ಕೈಂಕರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಎಂ.ಗುರುಪ್ರಸಾದ್ ರೈ ಮೊರಂಗಲ್ಲು, ಕುಟುಂಬದ ಯಜಮಾನರು ಮತ್ತು ಕುಟುಂಬಸ್ಥರು, ಸ್ಥಳೀಯ ಮೊರಂಗಲ್ಲು ಬೈಲಿನ ನಿವಾಸಿಗಳು ಆಗಮಿಸಿ ನಾಗನಿಗೆ ಹಾಲು ಮತ್ತು ಸೀಯಾಳ ಸಮರ್ಪಿಸಿ ಪ್ರಸಾದ ಸ್ವೀಕರಿಸಿದರು.