ಸೆ. 2: ಡಾ. ಉಮ್ಮರ್ ಬೀಜದಕಟ್ಟೆಯವರಿಂದ ಗುಲ್ಬರ್ಗದ ಸೇಡಂನಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ

0

ಹಿರಿಯ ಸಾಮಾಜಿಕ ಕಾರ್ಯಕರ್ತ, ಮಾನವ ಸಂಪನ್ಮೂಲ ಅಭಿವೃದ್ಧಿಯ ಯುವ ಸಾಧಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ *ಡಾ. ಉಮ್ಮರ್ ಬೀಜದಕಟ್ಟೆ ಯವರಿಂದ ಗುಲ್ಬರ್ಗದ ಸೇಡಂನಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ “ವ್ಯಕ್ತಿತ್ವ ವಿಕಸನ” (Personality Development) ಬಗ್ಗೆ ಒಂದು ದಿನದ ಉಚಿತ ತರಬೇತಿ ಕಾರ್ಯಕ್ರಮ‌ ಸೆಮ 2ರಂದು ನಡೆಯಲಿದೆ. ಈ ಕಾರ್ಯಕ್ರಮವನ್ನು ಗುಲ್ಬರ್ಗದ ಆಶ್ರಯ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸೇಡಂ (ರಿ) ಅಧೀನದಲ್ಲಿ ನಡೆಯುತ್ತಿರುವ
ಸ್ವಾಮಿ ವಿವೇಕಾನಂದ ಸಮಾಜ ಕಾರ್ಯ ಸ್ನಾತಕೋತರ ಮಹಾವಿದ್ಯಾಲಯ – ಸೇಡಂ, ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ಹಾಗೂ ಆಶ್ರಯ ಬ್ಯುಸಿನೆಸ್ ಸರ್ವಿಸಸ್ ಇದರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ಸೇಡಂ ವಿಧಾನ ಸಭಾ ಮಾಜಿ ಶಾಸಕರು, ಕಲ್ಬುರ್ಗಿ ವಿಬಾಗಿಯ ಪ್ರಭಾರಿಗಳು ಹಾಗೂ ಬಿಜೆಪಿ ರಾಜ್ಯ ವಕ್ತಾರರಾದ ಶ್ರೀ ರಾಜಕುಮಾರ ಪಾಟೀಲ ತೆಲ್ಕೂರು ರವರು ಉದ್ಘಾಟಿಸಲಿದ್ದು, ಅನೇಕ ಗಣ್ಯಾತಿಗಣ್ಯರು ಮತ್ತು ನೂರಾರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.