ಬೆಳ್ಳಾರೆ ರೋಟರಿ ಕ್ಲಬ್ ವತಿಯಿಂದ ಎಣ್ಮೂರು ಪ್ರೌಢಶಾಲೆಯಲ್ಲಿ ರೋಟರಿ ಯೂತ್ ಲೀಡರ್ ಶಿಪ್ ಎವಾರ್ಡ್ ಮಾಹಿತಿ ಕಾರ್ಯಾಗಾರ

0

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಆ.26 ರಂದು ಎಣ್ಮೂರು ಪ್ರೌಢಶಾಲೆಯಲ್ಲಿ ಆರ್.ವೈ.ಎಲ್.ಎ ಮಾಹಿತಿ ಕಾರ್ಯಾಗಾರ ನಡೆಯಿತು.


ಪರಿಸರ ಸಂರಕ್ಷಣೆಯ ಬಗ್ಗೆ ಪಂಜ ಉಪವಲಯ ಬಳ್ಪದ ಅರಣ್ಯಾಧಿಕಾರಿ ಸಂತೋಷ್ ರೈ ಕೆ.ಇವರು ಮಾಹಿತಿ ನೀಡಿದರು. ರೊ. ವಿಶ್ವನಾಥ ನಡುತೋಟ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಹಾಗೂ ರೊ. ಕೆ. ವಿ. ಪ್ರಸಾದ್ ಜೆ. ಇ ಮೆಸ್ಕಾಂ ಇವರು ವಿದ್ಯುತ್ ಬಳಕೆಯ ಬಗ್ಗೆ ಜಾಗೃತಿ , ಹಾಗೂ ರೊ. ವಿನಯ ಕುಮಾರ್ “4 way test “ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು.


ಸಮಾರಂಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರೊ. ಬಿ .ಕೆ. ಶಶಿಧರ ಕಾರ್ಯದರ್ಶಿ ರೊ. ವಿಶ್ವನಾಥ ರೊ .ರವೀಂದ್ರ ಗೌಡ, ರೊ.ಎ. ಕೆ.ಮಣಿಯಾಣಿ, ರೊ ವಿನಯಕುಮಾರ್, ರೊ|ನವೀನ್ ರೈ ರೊ.ಪ್ರಭಾಕರ ಆಳ್ವ, ರೊ.ಕೆ.ವಿ.ಪ್ರಸಾದ್ ರೊ.ಬಾಲಕೃಷ್ಣ ಮಡ್ತಿಲ, ಶಾಲೆಯ ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.