ಕೊಯನಾಡು: ಶ್ರೀ ಮಹಾಗಣಪತಿ ದೇವಸ್ಥಾನದ ಮಹಾಸಭೆ

0

ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಶ್ರೀ ಮಹಾಗಣಪತಿ ದೇವಸ್ಥಾನದ ಮಹಾಸಭೆಯು ಅಧ್ಯಕ್ಷ ಪಿ.ಡಿ. ವಿಶ್ವನಾಥ ಅವರ ಅಧ್ಯಕ್ಷತೆಯಲ್ಲಿ ದೇವಾಲಯದ ಸಭಾಭವನದಲ್ಲಿ ಆ.13ರಂದು ನಡೆಯಿತು.

ಈ ಸಂದರ್ಭದಲ್ಲಿ ಮುಂದಿನ ವರ್ಷದ ಆಡಳಿತ ಅವಧಿಗೆ ನೂತನವಾಗಿ ಅಧ್ಯಕ್ಷರಾಗಿ ಪಿ.ಡಿ. ವಿಶ್ವನಾಥ ಅವರನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಲೋಕಯ್ಯ ನಡುಬೆಟ್ಟು, ಸದಸ್ಯರಾಗಿ ಕೆ.ಬಿ.ಉಲ್ಲಾಸ, ಸುಂದರ ಬಿ.ಆರ್., ಯಶೋಧರ ಬಿ.ಜೆ.,ಅಪ್ಪಣ್ಣ, ಜಯಂತಿ ಎ.ಬಿ., ಗೋಪಾಲಕೃಷ್ಣ ಇ.ಆರ್., ಜಗದೀಶ ಕೆದಂಬಾಡಿ, ಸುಖೇಶ್ ಗುಡ್ಡೆಗದ್ದೆ, ಕೆ.ಕೆ. ಬೆಳ್ಳಚ್ಚಿ ಅವರನ್ನು ಆಯ್ಕೆಮಾಡಲಾಯಿತು.