ಗೋಕುಲಂ ಗೋಕುಲಾಷ್ಠಮಿ ಶ್ರೀ ಕೃಷ್ಣ ವೇಷ ಸ್ಪರ್ಧೆ -2023

0

ಸುಳ್ಯ ಗೋಕುಲಂ ಮಕ್ಕಳ ಸಿಧ್ಧ ಉಡುಪುಗಳ ಮಳಿಗೆ ಮತ್ತು ಶ್ರೀ ವೆಂಕಟರಮಣ ದೇವ ಮಂದಿರ ಅಂಬಟೆಡ್ಕ ಸುಳ್ಯ ಇದರ ಸಹಯೋಗದಲ್ಲಿ ಗೋಕುಲಂ ಗೋಕುಲಾಷ್ಠಮಿ ಶ್ರೀ ಕೃಷ್ಣ ವೇಷ ಸ್ಪರ್ಧೆಯು ಶ್ರೀ ಶ್ರೀನಿವಾಸ ಪದ್ಮಾವತಿ ಸಭಾಭವನದಲ್ಲಿ ಆ.27 ರಂದು ನಡೆಯಿತು.

ಮುದ್ದು ಕೃಷ್ಣ ವೇಷ ಹಾಕಿದ ಪುಟಾಣಿಗಳು ಸ್ಪರ್ಧೆಗೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ
ನವನೀತ್ ಎಂಟರ್ ಪ್ರೈಸಸ್ ಮಾಲಕ ಕೇಶವ ನಾಯಕ್ ಸುಳ್ಯ, ಗುರು ಶಾಮಿಯಾನ ಮಾಲಕ‌ ಜಿ.ಜಿ.ನಾಯಕ್ ಸುಳ್ಯ, ವೈಭವ್ ಟಯರ್ಸ್ ಮಾಲಕ ರಾಜೇಶ್, ಗೋಕುಲಂ ಪಾಲುದಾರರಾದ ಚಿದಾನಂದ ವಿದ್ಯಾನಗರ, ಅನೂಪ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಸಾದ್ ಕಾಟೂರು ಸ್ವಾಗತಿಸಿ, ವಂದಿಸಿದರು.
ಮುದ್ದು ಕೃಷ್ಣ ವೇಷ ಸ್ಪರ್ಧೆ ಯು 1-3 ವರ್ಷದೊಳಗಿನ ಹಾಗೂ 3 ರಿಂದ 5 ವರ್ಷದೊಳಗಿನ ಮಕ್ಕಳಿಗೆ ಮತ್ತು ರಾಧಾ ಕೃಷ್ಣ ವೇಷ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.