ಗೃಹಲಕ್ಷ್ಮಿ ಯೋಜನೆ ಜಾರಿ : ಮಂಡೆಕೋಲು ಗ್ರಾ.ಪಂ. ನಲ್ಲಿ ಕಿಕ್ಕಿರಿದು ಸೇರಿದ ಗ್ರಾಮಸ್ಥರು

0

ಎಲ್.ಇ.ಡಿ. ಪರದೆ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ

ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಇಂದು ಮೈಸೂರಿನಲ್ಲಿ ಅಧಿಕೃತ ಚಾಲನೆ ದೊರೆತಿದ್ದು ಮಂಡೆಕೋಲು ಗ್ರಾ.ಪಂ. ನಲ್ಲಿಯೂ ಕಾರ್ಯಕ್ರಮ ಅನುಷ್ಠಾನ ಮಾಡಲಾಯಿತು.

ಸಮಾರಂಭದಲ್ಲಿ ಕಿಕ್ಕಿರಿದು ಗ್ರಾಮಸ್ಥರು ಸೇರಿದ್ದರು.

ಅಧ್ಯಕ್ಷ ಕುಶಲ ಉದ್ದಂತಡ್ಕ, ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಮಾಜಿ ಉಪಾಧ್ಯಕ್ಷೆ ಅನಿಲ್ ತೋಟಪ್ಪಾಡಿ, ಸದಸ್ಯರುಗಳಾದ ಬಾಲಚಂದ್ರ ದೇವರಗುಂಡ, ಗೀತಾ ಸುಂದರ್ ನಾಯ್ಕ್, ರಾಧಿಕ ಮೈತಡ್ಕ, ಶ್ರೀಮತಿ ವಸಂತಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸದಾನಂದ ಮಾವಜಿ ಮೊದಲಾದವರು ಇದ್ದರು.

ನೋಡೆಲ್ ಅಧಿಕಾರಿ‌ ಶ್ರೀಮತಿ ಶೀತಲ್ ‌ಯು.ಕೆ. ಯೋಜನೆಯ ಉದ್ದೇಶದ ವಿವರ ಹಂಚಿಕೊಂಡರು. ಪಿ.ಡಿ.ಒ.ರಮೇಶ್ ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.

ಪಂಚಾಯತ್ ಸಭಾಂಗಣದಲ್ಲಿ ದೊಡ್ಡ ಎಲ್ ಇ ಡಿ ಪರದೆ ಅಳವಡಿಸಿ ಮೈಸೂರಿನಲ್ಲಿ ನಡೆದ ಗೃಹಲಕ್ಷ್ಮಿ ಯೋಜನೆಯ ಕಾರ್ಯಕ್ರಮದ ಉದ್ಘಾಟನೆ ಯನ್ನು ವೀಕ್ಷಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು.