ಸುದ್ದಿ ಸಮೂಹ ಸಂಸ್ಥೆ ಸುಳ್ಯ ಮತ್ತು‌ ಷರಾ ಪ್ರಕಾಶನ ಸುಳ್ಯ ಸಹಯೋಗದಲ್ಲಿ ನಡೆದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯ ಬಹುಮಾನ‌ ವಿತರಣೆ

0

ಸುದ್ದಿ ಸಮೂಹ ಸಂಸ್ಥೆ ಸುಳ್ಯ ಇದರ‌ ವತಿಯಿಂದ ಮತ್ತು ಷರಾ ಪ್ರಕಾಶನ‌ ಸುಳ್ಯ ಇದರ ಸಹಯೋಗದೊಂದಿಗೆ ಸ್ವಾತಂತ್ರ್ಯೋತ್ಸವ ಸಂಭ್ರಮದ ಅಂಗವಾಗಿ ನಡೆಸಿದ ವಿವಿಧ‌ ಸ್ಪರ್ಧೆಗಳ ವಿಜೇತರಿಗೆ ಸುಳ್ಯ ಆಸುಪಾಸಿನ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಆ.28ರಂದು ಸೈಂಟ್ ಬ್ರಿಜಿಡ್ಸ್ ಶಾಲಾ ಸಭಾಂಗಣದಲ್ಲಿ ನಡೆಯಿತು.ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಈ.ರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು.

ಸುದ್ದಿ ಸಮೂಹ ಸಂಸ್ಥೆಗಳ‌ ಆಡಳಿತ ನಿರ್ದೇಶಕರಾದ ಡಾ.ಯು.ಪಿ.ಶಿವಾನಂದ ಅಧ್ಯಕ್ಷತೆ ವಹಿಸಲಿದ್ದರು.ಷರಾ ಪ್ರಕಾಶನದ ಡಾ.ಜಯವಾಣಿ ಮತ್ತು ಸೈಂಟ್ ಬ್ರಿಜಿಡ್ಸ್ & ಸೈಂಟ್ ಜೋಸೆಫ್ ಶಾಲೆಯ ಸಂಚಾಲಕರಾದ ರೆ|ಫಾ| ವಿಕ್ಟರ್ ಡಿಸೋಜ ಬಹುಮಾನ ವಿತರಿಸಿದರು.

ಸುದ್ದಿ ಬಿಡುಗಡೆಯ ಮುಖ್ಯ ವರದಿಗಾರರಾದ ಹರೀಶ್ ಬಂಟ್ವಾಳ್ ಲಂಚ ಭ್ರಷ್ಟಾಚಾರ ವಿರುದ್ದ ಅಭಿಯಾನ ಫಲಕ ಅನಾವರಣಗೊಳಿಸಿ ಪ್ರತಿಜ್ಞೆ ಬೋಧಿಸಿದರು.

ಸೈಂಟ್ ಬ್ರಿಜಿಡ್ಸ್ ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಸಿ| ಅಂತೋನಿ ಮೇರಿ, ಷರಾ ಪ್ರಕಾಶನದ ಮೋಕ್ಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುದ್ದಿ ಪತ್ರಿಕೆ ವರದಿಗಾರರ ದಯಾನಂದ ಕೊರತ್ತೋಡಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ವರದಿಗಾರರ ಶರೀಫ್ ಜಟ್ಟಿಪಳ್ಳ ಸ್ವಾಗತಿಸದರು‌.

ಸುದ್ದಿಯ ವ್ಯವಸ್ಥಪಕ ಯಶ್ವಿತ್ ಕಾಳಮ್ಮನೆ ವಂದಿಸಿದರು. ಬೃಂದಾ ಪೂಜಾರಿ ಮುಕ್ಕೂರು ಕಾರ್ಯಕ್ರಮ ನಿರೂಪಿಸಿದರು.