ಸುಣ್ಣಮೂಲೆ ಮದರಸ ಮಕ್ಕಳ ಬಾಲ್ಯೊತ್ಸವ ಪ್ರಯುಕ್ತ ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ವಿವಿಧ ಸ್ಪರ್ಧೆ

0

ಎಸ್.ಕೆ.ಎಸ್.ಎಸ್.ಎಫ್. ಸುಣ್ಣಮೂಲೆ ಶಾಖಾ ವತಿಯಿಂದ ಸುಣ್ಣಮೂಲೆ ಹಾಗೂ ಕನಕಮಜಲು ಮದರಸದ ವಿದ್ಯಾರ್ಥಿಗಳಿಗೆ ಬಾಲ್ಯೊತ್ಸವ ಕಾರ್ಯಕ್ರಮವು ನಡೆಯಿತು.

ಸುಣ್ಣಮೂಲೆ ಬದ್ರಿಯಾ ಜುಮ್ಮಾ ಮಸೀದಿಯ ಖತೀಬರಾದ ಪ್ರಭಾರ ಮುಖ್ಯ ಶಿಕ್ಷಕ ಹರ್ಷದ್ ಬಾಖವಿ ಉಸ್ತಾದ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ತರಬೇತುದಾರರಾಗಿ ಕನಕಮಜಲು ಸಿರಾಜುಲ್ ಇಸ್ಲಾಂ ಮದರಸದ ಶಿಕ್ಷಕ ಆಶಿಕ್ ಇರ್ಫಾನಿ ಉಸ್ತಾದ್ ರವರು ‘ವ್ಯಕ್ತಿ ಜೀವನದಲ್ಲಿ ಸಮಸ್ತ’ ಎನ್ನುವ ಕುರಿತು ವಿವರಿಸಿದರು. ನಂತರ ಮದರಸ ವಿದ್ಯಾರ್ಥಿಗಳಿಗೆ ಚಿತ್ರರಚನೆ, ಹಾಡು, ಕ್ವಿಜ್ ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ಸುಣ್ಣಮೂಲೆ ಶಾಖಾ ವತಿಯಿಂದ ಸಿಹಿತಿಂಡಿ ಹಾಗೂ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಸೀದಿ ಆಡಳಿತ ಸಮಿತಿಯ ಪದಾಧಿಕಾರಿಗಳು, ಮದ್ರಸ ಸಮಿತಿ ಹಾಗೂ ಎಸ್.ಕೆ.ಎಸ್.ಎಸ್.ಎಫ್. ಹಾಗೂ ಎಸ್.ಕೆ.ಎಸ್.ಬಿ.ವೈ. ಪದಾಧಿಕಾರಿಗಳು,ಜಮಾಅತರು ಉಪಸ್ಥಿತರಿದ್ದರು.
ಅಬುಸಾಲಿ ಸ್ವಾಗತಿಸಿ ಶಾಕೀರ್ ಕಂಚಿಲ್ಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.