ಸೆ. 19, 20: ಯೇನೆಕಲ್ಲಿನ ಬಾಲಾಡಿ ಶ್ರೀ ಆದಿಶಕ್ತಿ ಭಜನಾ ಮಂದಿರದಲ್ಲಿ ಗಣೇಶೋತ್ಸವ

0

ಯೇನೆಕಲ್ಲಿನ ಶ್ರೀ ಆದಿಶಕ್ತಿ ಭಜನಾ ಮಂದಿರದಲ್ಲಿ 16 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ. 19 ಮತ್ತು 20ರಂದು ನಡೆಯಲಿದೆ.
ಸೆ. 19ರಂದು ಪೂ. 8.00 ಕ್ಕೆ ಗಣಪತಿ ಹೋಮ, ಬಳಿಕ ಪ್ರತಿಷ್ಠಾಪನೆ, ಸಂಜೆ 6.00 ಗಂಟೆಯಿಂದ ಭಜನಾ ಕಾರ್ಯಕ್ರಮ. ಸೆ. 20 ರಂದು ಬೆಳಿಗ್ಗೆ 10.30 ರಿಂದ ಶ್ರೀ ಧರ್ಮಶಾಸ್ತಾವು ಕುಣಿತ ಭಜನಾ ತಂಡ ಬಳ್ಪ ಮತ್ತು ಶ್ರೀ ಆದಿಶಕ್ತಿ ಕುಣಿತ ಭಜನಾ ತಂಡ ಯೇನೆಕಲ್ಲು ಇವರಿಂದ ಕುಣಿತ ಭಜನೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ಅಪರಾಹ್ನ 2.30 ರಿಂದ ಶೋಭಾಯಾತ್ರೆ ಬಳಿಕ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಬಳಿ ನದಿಯಲ್ಲಿ ಜಲಸ್ಥಂಭನ ನಡೆಯಲಿದೆ.