ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯ ತಾಲೂಕು ಘಟಕದ ಸಭೆ

0

ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯ ತಾಲೂಕು ಘಟಕದ ಸಭೆಯು ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, ದ.ಕ ಜಿಲ್ಲಾಧ್ಯಕ್ಷಒಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್ ಆಗಮಿಸಿದ್ದರು.

ಅಡಿಕೆ ಎಲೆ ಹಳದಿ ರೋಗದ ಅರ್ಜಿಯ ಆಧಾರದ ಮೇಲೆ ಸರಕಾರಕ್ಕೆ ವರದಿ ಸಲ್ಲಿಸಲು ಡಾ.ಪ್ರಕಾಶ್ ಕಮ್ಮರಡಿಯವರನ್ನು ಭೇಟಿಯಾಗಿ ಕರೆಸುವುದು ಹಾಗು ರೈತರ ವಿವಿಧ ಸಮಸ್ಯೆಗಳನ್ನು ಚರ್ಚಿಸಲಾಯಿತು.

ವಿವರವಾದ ಮನವಿಯನ್ನು ತಯಾರಿಸಿ ಜಿಲ್ಲಾಧಿಕಾರಿ ಹಾಗು ಉಸ್ತುವಾರಿ ಸಚಿವರಿಗೆ ನೀಡುವ ಬಗ್ಗೆ, ಜಿಲ್ಲಾಧಿಕಾರಿಯವರು ಕೂಡಲೇ ರೈತರ ಸಭೆ ಕರೆದು ರೈತರ ಸಮಸ್ಯೆಗಳನ್ನು ಚರ್ಚಿಸಬೇಕೆಂದು ಮನವಿ ಮಾಡಲು ನಿರ್ಣಯಿಸಲಾಯಿತು.

ಸಭೆಯಲ್ಲಿ ತಾಲೂಕು ಘಟಕದ ಪದಾಧಿಕಾರಿಗಳು, ಗ್ರಾಮ ಘಟಕದ ಪದಾಧಿಕಾರಿಗಳು ಹಾಗು ಸದಸ್ಯರು ಹಾಜರಿದ್ದರು.