ಬೆಳ್ಳಾರೆ : ಅಣಬೆ ಕೃಷಿ ತರಬೇತಿ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕಿನಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಸೃಜನ ಶೀಲ ಕಾರ್ಯಕ್ರಮದಡಿಯಲ್ಲಿ ಬೆಳ್ಳಾರೆ ವಲಯದ ನಂದಿನಿ, ಮಾತೃಶ್ರೀ, ನಿಸರ್ಗ, ಶ್ರೀ ಲಕ್ಷ್ಮಿ, ಜ್ಞಾನದೀಪ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ ಅಣಬೆ ಕೃಷಿ ತರಬೇತಿ
ನಡೆಯಿತು.

ಸುಳ್ಯದ ಉದ್ಯಮಿ ಶ್ರೀಮತಿ ಲತಾ ಕುತ್ಪಾಜೆ ಯವರು ದೀಪ ಬೆಳಗಿಸಿ ಅಣಬೆ ಕೃಷಿ ತರಬೇತಿ ಉದ್ಘಾಟಿಸಿದರು.

ಅಣಬೆ ಕೃಷಿ ಮಾಹಿತಿ/ತರಬೇತಿ ನೀಡಿ ಸದಸ್ಯರಿಗೆ ಅಣಬೆ ಬೀಜ ವಿತರಿಸಲಾಯಿತು.

ಅಧ್ಯಕ್ಷತೆಯನ್ನು ಶಶಿ ಭಾಸ್ಕರ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷೆ ಪ್ರೇಮಲತಾ, ಹರಿಣಾಕ್ಷಿ ರೈ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಭಾರತಿ, ಮೇಲ್ವಿಚಾರಕರಾದ ಗೋಪಾಲಕೃಷ್ಣ, ಸೇವಾ ಪ್ರತಿನಿಧಿಯಾದ ಪ್ರಿಯಾ ಹಾಗೂ ಜೆಸಿಐ ವಲಯಾಧಿಕಾರಿ ಶ್ರೀಮತಿ ನಿರ್ಮಲ ಜಯರಾಂ, ಐದು ಕೇಂದ್ರದ ತರಬೇತಿ ಪಡೆದುಕೊಳ್ಳುವ ಸದಸ್ಯರು ಉಪಸ್ಥಿತರಿದ್ದರು.