ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ವತಿಯಿಂದ ಅಡ್ಕಾರು ವನವಾಸಿ ಮಕ್ಕಳ ವಸತಿ ನಿಲಯಕ್ಕೆ ಆಹಾರ ಸಾಮಾಗ್ರಿಗಳ ವಿತರಣೆ

0

ಲಯನ್ಸ್ ಕ್ಲಬ್‌ ಬೆಳ್ಳಾರೆ ಜಲದುರ್ಗ ಇದರ ವತಿಯಿಂದ, ಸುಳ್ಯದ ಅಡ್ಕಾರ್ ನಲ್ಲಿರುವ ವನಸುಮ ವನವಾಸಿ ವಿದ್ಯಾರ್ಥಿ ನಿಲಯಕ್ಕೆ ದಿನಸಿ ಆಹಾರವನ್ನು ಲಯನ್ಸ್ ಕ್ಲಬ್ ಪ್ರಾಂತ್ಯಾಧ್ಯಕ್ಷರಾದ, ಲ. ರೇಣುಕಾ ಸದಾನಂದ ಜಾಕೆ, ಜಾಲ್ಸೂರು ಪಯಸ್ವಿನಿ ಶಾಲೆಯ ಸಂಚಾಲಕ ಲ. ಸದಾನಂದ ಜಾಕೆ ಇವರ ಉಪಸ್ಥಿತಿಯಲ್ಲಿ ಕ್ಲಬ್ ನ ಅಧ್ಯಕ್ಷರಾದ ವಿಠಲ ಶೆಟ್ಟಿ, ಲಯನ್ ಭವಾನಿ ವಿ ಶೆಟ್ಟಿ ದಂಪತಿಗಳು ವಸತಿ ನಿಲಯದ ನಿರ್ವಾಹಕಿ ಯಮುನಾ ಅವರಿಗೆ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಕ್ಲಬ್ ವಿಸ್ತರಣಾಧಿಕಾರಿ ಲ. ಆನಂದ ರೈ ಮತ್ತು ಅವರ ಪತ್ನಿ ಲ. ಸುಮಿತಾ ಎ ರೈ, ಕ್ಲಬ್ ಕಾರ್ಯದರ್ಶಿ ಲ. ದಯಾನಂದ ನಾಯ್ಕ್, ಸದಸ್ಯರಾದ ಹೊನ್ನಪ್ಪ ಬೆಳ್ಳಾರೆ, ಪತ್ರಕರ್ತ ಈಶ್ವರ್ ಅವರು ಉಪಸ್ಥಿತರಿದ್ದರು. ಮಕ್ಕಳ ಪ್ರಾರ್ಥನೆಯೊಂದಿಗೆ, ನಿರ್ವಾಹಕಿ ಯಮುನಾ ಅವರು ನಿಲಯದ ಸ್ಥಾಪನೆ, ದ್ಯೇಯೋದ್ಧೇಶದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಸುಳ್ಯ ಸುದ್ದಿ ವಾರಪತ್ರಿಕೆಯ ವರದಿಗಾರ ಈಶ್ವರ ವಾರಣಾಶಿ ಸ್ವಾಗತಿಸಿ, ಕ್ಲಬ್ ಕಾರ್ಯದರ್ಶಿ ದಯಾನಂದ ನಾಯ್ಕ್ ವಂದಿಸಿದರು. ನಿಲಯದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಸಿಹಿತಿಂಡಿ ವಿತರಿಸಲಾಯಿತು.