ಗಾಂಧಿನಗರ ಬೈತುಲ್ ಬಿರ್ರ್ ವತಿಯಿಂದ ಸಾಮೂಹಿಕ ವಿವಾಹ ಹಾಗೂ ಏಳು ಬಡ ಕುಟುಂಬಕ್ಕೆ ಮನೆ ಹಸ್ತಾಂತರ

0


ಶಾಹುಲ್ ಹಮೀದ್ ರವರ ನೂತನ ಗೃಹಪ್ರವೇಶ ಕಾರ್ಯಕ್ರಮದ ಅಂಗವಾಗಿ ಗಾಂಧಿನಗರ ಬೈತುಲ್ ಬಿರ್ರ್ ವತಿಯಿಂದ ಸಾಮೂಹಿಕ ವಿವಾಹ ಹಾಗೂ ಏಳು ಬಡ ಕುಟುಂಬಕ್ಕೆ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.


ಸುಳ್ಯ ವಿಧಾನಸಭಾ ಕ್ಷೇತ್ರ ಯೂತ್ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮಟ್ಟೆ ನೇತೃತ್ವ ವಹಿಸಿದ್ದರು.

ಮಾಜಿ ಸಚಿವ ರಮನಾಥ ರೈ, ಸಾಮಾಜಿಕ ಕಾರ್ಯಕರ್ತ ರಾಕೇಶ್ ಮಲ್ಲಿ, ಅಂತರಾಷ್ಟ್ರೀಯ ಖ್ಯಾತಿಯ ವಾಗ್ಮಿ ಹಾಫೀಲ್ ಸಿರಾಜುದ್ದೀನ್ ಕಾಸಿಂ ಪತ್ತನಾಪುರಂ,ಖಲೀಲ್ ಹುದವಿ, ಸಯ್ಯದ್ ಹುಸೈನ್ ತಂಗಳ್,ಅಲ್ ಹಾಜ್ ಅಶ್ರಫ್ ಕಾಮಿಲ್ ಸಕಾಫಿ ಗಾಂಧಿ ನಗರ, ಅಬ್ದುಲ್ ರಝಕ್ ಅಬ್ರಾರಿ ರವರು ವಧುರವರಿಗೆ ನಿಖಾ ಕಾರ್ಯ ನಡೆಸಿದರು.


ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿ, ಹಾಜಿ ಮುಸ್ತಫಾ ಸ್ವಾಗತಿಸಿದರು.
ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.