ಬೆಳ್ಳಾರೆ ನಿನಾದ ತಂಡದಿಂದ ಜಮ್ಮು ಕಾಶ್ಮೀರದಲ್ಲಿ ನೃತ್ಯ ವೈಭವ

0


ವಸಂತ ಶೆಟ್ಟಿ ಬೆಳ್ಳಾರೆಯವರ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ
ಕಳಂಜ ಗ್ರಾಮದ ತಂಟೆಪ್ಪಾಡಿಯ ನಿನಾದ ಸಾಂಸ್ಕೃತಿಕ ಕೇಂದ್ರದ ಆಶ್ರಯದಲ್ಲಿ ಅ. 15ರಂದು ಜಮ್ಮು ಕಾಶ್ಮೀರದಲ್ಲಿ ನಡೆದ ನೃತ್ಯ ವೈಭವ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು. ನಿನಾದ ಸಾಂಸ್ಕೃತಿಕ ಕಲಾಕೇಂದ್ರದ ಕಾರ್ಯದರ್ಶಿ ಪ್ರಮೋದ್ ರೈ ಬೆಳ್ಳಾರೆಯವರ ಮಾರ್ಗದರ್ಶನದಲ್ಲಿ, ಹಿತೈಷಿ ಶೆಟ್ಟಿಯವರ ಮುಂದಾಳತ್ವದಲ್ಲಿ ವಿದುಷಿ ಪೃಥ್ವಿ ಪಿ. ಶೆಟ್ಟಿ, ರಕ್ಷಿತಾ ಎಂ.ಕೆ, ರಚಿತಾ, ಅಭಿಜ್ಞಾ ಎ ಮತ್ತು ಹಂಸನಂದಿನಿ ನೃತ್ಯ ಪ್ರದರ್ಶನ ನೀಡಿದರು.