ಮೂವಪ್ಪೆ ಸ.ಕಿ.ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕುಣಿತ ಭಜನೆ ಉದ್ಘಾಟನೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೊಡಿಯಾಲ ‘ಎ ‘ಅಧ್ಯಕ್ಷರು ಪದಾಧಿಕಾರಿಗಳ ಸಹಕಾರದೊಂದಿಗೆ ಅ.17ರಂದು ಕಲ್ಪಡ ಮೊವಪ್ಪೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ ಮಕ್ಕಳ ” ಕುಣಿತ ಭಜನೆ ” ಕಾರ್ಯಕ್ರಮ ವನ್ನು ದೇವಸ್ಥಾನ ಅರ್ಚಕರಾದ ಶಿವರಾಮ ಉಪಾಧ್ಯಾಯ ರವರು ದೇವರ ಸ್ತುತಿ ಮೂಲಕ ಉದ್ಘಾಟನೆ ಮಾಡಿದರು. ಈ ಸಂದರ್ಭ ಬೆಳ್ಳಾರೆ ವಲಯ ಮೇಲ್ವಿಚಾರಕರಾದ ಗೋಪಾಲಕೃಷ್ಣ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕುಣಿತ ಭಜನೆ ತರಬೇತುದಾರರಾದ ಹರ್ಷಿತ್, ಶಾಲಾ ಮುಖ್ಯಗುರುಗಳಾದ ಶ್ರೀಮತಿ ನಿರ್ಮಲ, ಸುಂದರ ನಾಯ್ಕ ಶ್ರೀ ಹರಿ ಭಜನಾಮಂಡಳಿ ನಿಕಟಪೂರ್ವ ಅಧ್ಯಕ್ಷರು ಪುಣಚತ್ತಾರು ” ಕಲ್ಪಡ ಉಲ್ಲಾಕುಲು ದೈವಸ್ಥಾನ ಅಧ್ಯಕ್ಷರಾದ ಕೇಶವ .ಕೆ. ಶ್ರೀಮತಿ ಪೂರ್ಣಿಮಾ ಉಪಾಧ್ಯಯ , ದಾಮೋದರ ಪೊಟ್ರೆ , ರಾಜೇಶ್ ಕಣಿಲೆಗುಂಡಿ, ಬಾಬು ಪೂಜಾರಿ ಕಲ್ಪಡ, ಕೊಡಿಯಾಲ ಸೇವಾಪ್ರತಿನಿಧಿ ರಾಧಾಕೃಷ್ಣ , ಒಕ್ಕೂಟ ಪದಾಧಿಕಾರಿಗಳು , ಸಂಘದ ಸದಸ್ಯರು ಶಾಲಾಭಿವೃದ್ಧಿ ಸಮಿತಿ ಯವರು ಹಾಜರಿದ್ದರು.. ತರಬೇತಿ ಪಡೆಯುವ 23 ಮಕ್ಕಳು ಭಾಗವಹಿಸಿದರು.