ಪಂಜ ದೇವಳದ ಗದ್ದೆಯಿಂದ ಮನೆ ಮನೆಗಳಿಗೆ ಕದಿರು

0

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಭತ್ತದ ಗದ್ದೆಯಿಂದ ಈ ವರ್ಷ ಹಲವಾರು ಮನೆಗಳಿಗೆ ಮನೆ ತುಂಬಿಸುವ ಕಾರ್ಯಕ್ರಮಕ್ಕಾಗಿ ಕದಿರನ್ನು ನೀಡಲಾಯಿತು.

ಜೇಸಿಐ ಪಂಜ ಪಂಚಶ್ರೀ ತನ್ನ ಬೆಳ್ಳಿ ಹಬ್ಬದ ನೆನಪಿಗೋಸ್ಕರ ದಾನಿಗಳ ಸಹಕಾರದಿಂದ ಪಂಜ ದೇವಳದ ಜಾಗದಲ್ಲಿ ಭತ್ತದ ಗದ್ದೆಯನ್ನು ನಿರ್ಮಿಸಲಾಗಿತ್ತು. ಎರಡನೇ ವರ್ಷದ ಈ ಸಾಗುವಳಿಯಲ್ಲಿ ಹಲವಾರು ಮನೆಗಳಿಗೆ ಪಂಜ ದೇವಳದ ಆಸು ಪಾಸಿನ ಎಲ್ಲಿಯೂ ಕದಿರು ಸಿಗದ ಸಂದರ್ಭದಲ್ಲಿ ಊರ ಪರ ಊರಿನ ಜನರು ಪಂಜ ದೇವಳದ ಗದ್ದೆಗೆ ಬಂದು ಕದಿರನ್ನು ಅವರವರ ಮನೆಗೆ ಕೊಂಡೊಯ್ಯುವುದು ದೇವಳದ ಭಕ್ತರಿಗೆ ಖುಷಿ ನೀಡಿದೆ.