ಸುಳ್ಯ ನಗರ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರ ಮಾಸಿಕ ವರ್ಗ ಹಾಗೂ ಜವಬ್ದಾರಿ ಘೋಷಣೆ

0

ಸುಳ್ಯ ನಗರ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಂಘಟನೆಯ ಕಾರ್ಯಕರ್ತರ ಮಾಸಿಕ ವರ್ಗ ಹಾಗೂ ಕಾರ್ಯಕರ್ತರಿಗೆ ಜವಬ್ದಾರಿ ಹಂಚಿಕೆಯ ಘೋಷಣೆಯು ಸುಳ್ಯ ಸಿ.ಎ.ಬ್ಯಾಂಕ್ ಸಭಾಂಗಣದಲ್ಲಿ ಅ.19 ರಂದು ನಡೆಯಿತು.

ವಿಶ್ವ ಹಿಂದೂ ಪರಿಷತ್ ಸುಳ್ಯ ನಗರ ನೂತನ ಅಧ್ಯಕ್ಷ ಉಪೇಂದ್ರ ಕಾಮತ್, ಉಪಾಧ್ಯಕ್ಷ ಮನೋಜ್ ಕುಮಾರ್,
ಜಿಲ್ಲಾ ಬಜರಂಗದಳ ಸಹ ಸಂಚಾಲಕ ಲತೀಶ್ ಗುಂಡ್ಯ,ವಿ.ಹೆಚ್.ಪಿ ಕಾರ್ಯದರ್ಶಿ ನವೀನ್ ಎಲಿಮಲೆ,ಸುಳ್ಯ ಪ್ರಖಂಡದ ಬಜರಂಗದಳ ಸಹ ಸಂಚಾಲಕ ಸನತ್ ಚೊಕ್ಕಾಡಿ,ಗೋರಕ್ಷ ಪ್ರಮುಖ್ ಅರವಿಂದ್ ಸುಳ್ಯ, ಬಜರಂಗದಳ ಸಹ ಸಂಚಾಲಕ ವಿಘ್ನೇಶ್ ಆಚಾರ್ಯ,ವಿ.ಹೆಚ್.ಪಿ ಸಹ ಕಾರ್ಯದರ್ಶಿ ದೀಕ್ಷಿತ್ ಪಾನತ್ತಿಲ,ಸಹ ಸಂಚಾಲಕ ಗಿರಿಧರ ನಾರಾಲು ರವರಿಗೆ ವಿವಿಧ ಜವಬ್ದಾರಿ ಹಂಚಿಕೆಯನ್ನು ಘೋಷಿಸಲಾಯಿತು.

ಈ ಸಂದರ್ಭದಲ್ಲಿ ವರ್ಷಿತ್ ಚೊಕ್ಕಾಡಿ, ರೂಪೇಶ್ ಪೂಜಾರಿಮನೆ, ಅಭಿಜಿತ್,ಹರೀಶ್ ಜಟ್ಟಿಪಳ್ಳ,ಕಾರ್ತಿಕ್ ಬೆಟ್ಟಂಪಾಡಿ, ರಾಜೇಶ್ ಕಲ್ಲುಮುಟ್ಲು, ತಿರುಮಲೇಶ್ವರ,ವಿನಯ್ ಐವರ್ನಾಡು, ನೂತನ್, ಜಸ್ಮಿತ್, ರಕ್ಷಿತ್, ಸಂತೋಷ್, ಮಿಥುನ್, ಪ್ರಶಾಂತ್, ಪ್ರಮೋದ್, ನವನೀತ್, ರವಿ, ದಿಲೀಪ್, ಅನೀಶ್, ಕಾರ್ತಿಕ್, ಕೊಟೇಶ್, ನಿಕೇಶ್, ಶರತ್ ಹಾಗೂ ಬಜರಂಗದಳದ ಕಾರ್ಯಕರ್ತರು ಉಪಸ್ಥಿತರಿದ್ದರು.