ಅಮರಮುಡ್ನೂರು: ಪೈಲಾರಿನ ಶ್ರವಣ್ ಕೊಡ್ತುಗುಳಿ ರಾಷ್ಟ್ರೀಯ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮಕ್ಕೆ ಆಯ್ಕೆ

0

ಭಾರತ ಸರ್ಕಾರ ಅಯೋಜಿಸುವ ರಾಷ್ಟ್ರೀಯ ಮಟ್ಟದ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮಕ್ಕೆ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ,ನೆಹರು ಯುವ ಕೇಂದ್ರ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯಿಂದ ಶ್ರವಣ್ ಕೊಡ್ತುಗುಳಿ ಯವರು ರಾಷ್ಟ್ರೀಯ ಮಟ್ಟದ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ಯುವ ಚಾಂಪಿಯನ್ ಆಗಿ ಭಾಗವಹಿಸಲಿದ್ದಾರೆ.
ದೇಶದ ಎಲ್ಲಾ ಭಾಗಗಳಿಂದ ಯುವ ಜನರು ದೆಹಲಿಯಲ್ಲಿ
ಅ. 30 ಮತ್ತು 31 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಯುವಜನರನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ‌ಮೋದಿಯವರು ಮಾತನಾಡಲಿದ್ದಾರೆ.
ಇವರುಅಮರಮುಡ್ನೂರು ಗ್ರಾಮದ ಪೈಲಾರಿನ ನಾರಾಯಣ ಕೊಡ್ತುಗುಳಿ ಮತ್ತು ಕುಸುಮಾವತಿ ದಂಪತಿಯ ಪುತ್ರ. ಪೈಲಾರು
ಫ್ರೆಂಡ್ಸ್ ಕ್ಲಬ್ ನ ನಿರ್ದೇಶಕರಾಗಿರುತ್ತಾರೆ.