ಸ್ಕೂಟಿಗೆ ಗುದ್ದಿದ ಬಳಿಕ ಮನೆಗೆ ನುಗ್ಗಿ ಅವಾಂತರ ಸೃಷ್ಟಿಸಿದ ಚಾಲಕ

0


ಜಾಲ್ಸೂರಿನ ಕಾಳಂಮನೆಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟಿಗೆ ಕಾರು ಗುದ್ದಿದ ಚಾಲಕ ಬಳಿಕ ಪಕ್ಕದ ಮನೆಗೆ ಹೋಗಿ ಅವಾಂತರ ಸೃಷ್ಟಿಸಿರುವ ಘಟನೆ ವರದಿಯಾಗಿದೆ.


ಬೆಳಿಗ್ಗೆ ಯಶ್ವಿತ್ ಕಾಳಂಮನೆಯವರ ಸ್ಕೂಟಿ ಜಾಲ್ಸೂರಿನ ಅವರ ಮನೆಯ ಎದುರು ರಸ್ತೆಯ ಬದಿ ನಿಲ್ಲಿಸಿದ್ದರು. ಮುಡೂರಿನಿಂದ ಬಂದ ಕಾರೊಂದು ಸ್ಕೂಟಿಗೆ ಡಿಕ್ಕಿಯಾಯಿತು. ಸ್ಕೂಟಿ ಸಂಪೂರ್ಣ ನುಜ್ಜುಗುಜ್ಜಾಯಿತು.

ಕಾರು ಚಲಾಯಿಸುತ್ತಿದ್ದ ಚಾಲಕ ಕಿರಣ್ ಕಾರಿನಿಂದ ಇಳಿದು ರಸ್ತೆಯಲ್ಲಿ ಅತ್ತಿಂದಿತ್ತ ಓಡಾಡಿದನಲ್ಲದೆ, ರಸ್ತೆಯ ಬದಿಯ ಮನೆಯೊಂದಕ್ಕೆ ನುಗ್ಗಿ ಮಗುವಿಗೆ ಹೊಡೆದನೆಂದೂ,ಮಗು ಬೊಬ್ಬೆ ಇಟ್ಟಾಗ ಮನೆಯವರೆಲ್ಲರು ಬಂದರೆಂದೂ ಬಳಿಕ ಜನ ಸೇರಿ ಕಾರು ಚಾಲಕ ಕಿರಣ್ ರನ್ನು ಹಿಡಿದುಕೊಂಡರು. ವಿಷಯ ಪೊಲೀಸರಿಗೆ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.