ಎಣ್ಮೂರು ಪ್ರೌಢ ಶಾಲಾ ಮತ್ತು ಅಲೆಕ್ಕಾಡಿ ಪೊಳಂಜ ರಸ್ತೆ ಕಾಮಗಾರಿ ಶಾಸಕರಿಂದ ಗುದ್ದಲಿ ಪೂಜೆ

0


ಎಣ್ಮೂರು ಪ್ರೌಢಶಾಲಾ ಸಂಪರ್ಕ ರಸ್ತೆ ಮತ್ತು ಅಲೆಕ್ಕಾಡಿ ಪೊಳಂಜ ತೀರ ಹದಗೆಟ್ಟಿದ್ದು ನಡೆದಾಡಲು ಅಸಾಧ್ಯವಾಗಿ ಬಹು ವರ್ಷದ ಬೇಡಿಕೆಯಿದ್ದು ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯರವರು ಅನುದಾನ ಒದಗಿದ್ದು ಸರಕಾರದ ಯೋಜನೆಯಾಗಿರುತ್ತದೆ, ನ.6 ಶಾಸಕರಾದ ಕು. ಭಾಗೀರಥಿ ಮುರುಳ್ಯರವರು ದೀಪ ಪ್ರಜ್ವಲನೆ ಮಾಡಿ , ತೆಂಗಿನಕಾಯಿ ಒಡೆದು , ಗುದ್ದಲಿಯಲ್ಲಿ ಅಗೆದು ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿದರು ,

ಈ ಸಂದರ್ಭದಲ್ಲಿ ಸ್ಥಳೀಯರು ಅಲ್ಲದೆ ಕೇರ್ಪಾಡ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಮುರುಳ್ಯ ಪಂಚಾಯತ್ ಅಧ್ಯಕ್ಷೆ ವನಿತಾ ಸುವರ್ಣ ಬಾಮೂಲೆ , ಉಪಾಧ್ಯಕ್ಷ ಜಾನಕಿ ಮುರುಳ್ಯ , ಸದಸ್ಯರಾದ ಕರುಣಾಕರ ಹುದೇರಿ , ಮೋನಪ್ಪ ಗೌಡ ಅಲೇಕಿ, ಸುಂದರ ಗೌಡ ಪಾಪುತ್ತಡಿ, ಕರುಣಾಕರ ಹುದೇರಿ , ಪುಷ್ಪಾಲತ .ಡಿ., ಶೀಲಾವತಿ ಗೋಳ್ತಿಲ, ವಸಂತಹುದೇರಿ ಪ್ರೌಢಶಾಲಾ ಎಸ್. ಡಿ. ಎಂ.ಸಿ. ಅಧ್ಯಕ್ಷ ಪದ್ಮನಾಭ ಪೂದೆ, ಸದಸ್ಯರು ,ಪೋಷಕರು ಶಿಕ್ಷಕ ವೃಂದಾ ಉಪಸ್ಥಿತರಿದ್ದರು.

ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕ ಲಿಂಗಪ್ಪ ಬೆಳ್ಳಾರೆ ಸ್ವಾಗತಿಸಿದರು, ಡ್ರಾಯಿಂಗ್ ಮಾಸ್ಟರ್ ಮೋಹನ್ ಕುಮಾರ್ ವಂದಿಸಿದರು.